ಭಟ್ಕಳ: ನಿವೃತ್ತ ಜೀವ ವಿಮಾ ಇಲಾಖೆ ಅಧಿಕಾರಿ ಶ್ರೀ ಮಂಜುನಾಥ ಎನ್. ಬೈಂದೂರು ಇವರಿಗೆ ಅವರ ಮಾಲಕತ್ವದ ಶ್ರೀ ಸಾಯಿ ಪ್ಯಾಲೇಸ್ ಸರ್ಪನ ಕಟ್ಟೆ ಭಟ್ಕಳ ಇಲ್ಲಿಗೆ ಭೇಟಿ ನೀಡಿದ್ದು, ಈ ವೇಳೆ ಕನ್ನಡ ಭವನದ ಸ್ಮರಣಿಕೆ ಹಾಗೂ ಮಾಹಿತಿ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಸರಗೋಡು ಕನ್ನಡ ಭವನ ಸ್ಥಾಪಕಾಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ಕನ್ನಡ ಭವನ ಪ್ರಕಾಶನ ಸಂಸ್ಥೆಯ ಪ್ರಕಾಶಕಿ, ವಿಶ್ವ ರಾಮಕ್ಷತ್ರಿಯ ಮಹಾಸಂಘ ಸಂಘಟನಾ ಕಾರ್ಯದರ್ಶಿ ಸಂಧ್ಯಾರಾಣಿ ಟೀಚರ್, ಸಂಘಟಕ, ವಿಶ್ವ ರಾಮಕ್ಷತ್ರಿಯ ಮಹಾಸಂಘ ಪದಾಧಿಕಾರಿ, ಶ್ರೀ ಗಣಪತಿ ಹೋಬಳಿದಾರ್, ಬೈಂದೂರು, ಕನ್ನಡ ಭವನದ ದ. ಕ. ಜಿಲ್ಲಾಧ್ಯಕ್ಷೆ, ವಿಶ್ವ ರಾಮಕ್ಷತ್ರಿಯ ಸಂಘ ಸಂಪಾದಕಿ, ರೇಖಾ ಸುದೇಶ್ ರಾವ್ ಮಂಗಳೂರು, ಶಿಕ್ಷಣ ಕ್ಷೇತ್ರ, ಸಂಘಟಕ, ನಾಗರಾಜ್ ಮದ್ದೋಡಿ ಮಂಗಳೂರು, ಕನ್ನಡ ಭವನ ನಿರ್ದೇಶಕ ರವೀಂದ್ರನ್ ಪಾಡಿ ಮುಂತಾದವರಿದ್ದರು.
ನಿವೃತ್ತ ಜೀವ ವಿಮಾ ಇಲಾಖೆ ಅಧಿಕಾರಿ ಮಂಜುನಾಥ ಎನ್. ಅವರಿಗೆ ಕನ್ನಡ ಭವನದ ಸ್ಮರಣಿಕೆ ನೀಡಿ ಗೌರವಾರ್ಪಣೆ
RELATED ARTICLES