Tuesday, May 13, 2025
Homeಅಪರಾಧಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ.ದರೋಡೆ; ತಿರುಟ್ ತಂಡದಿಂದ ಕೃತ್ಯ

ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ.ದರೋಡೆ; ತಿರುಟ್ ತಂಡದಿಂದ ಕೃತ್ಯ

ಉಪ್ಪಳ : ಮಂಜೇಶ್ವರ ಠಾಣೆಯಲ್ಲಿ ನಡೆದ ಖಾಸಗಿ ಬ್ಯಾಂಕ್‌ಗೆ ಹಣ ತುಂಬಲು ಬಂದ ವಾಹನದಿಂದ 50 ಲಕ್ಷ ರೂಪಾಯಿ ದರೋಡೆ ನಡೆದಿದೆ ಎಂಬ ಪ್ರಕರಣ ತಿಳಿದುಬಂದಿದೆ. ಈ ಕೃತ್ಯವನ್ನು ತಮಿಳುನಾಡಿನ ತಿರುಟ್ ತಂಡವು ನಡೆಸಿದ್ದಾಗಿ ಪೊಲೀಸರಿಗೆ ತಿಳಿದುಬಂದಿದೆ.

ತಮಿಳುನಾಡಿನ ಈ ತಿರುಟ್ ತಂಡದಲ್ಲಿ ಸುಮಾರು 30 ಜನ ಸದಸ್ಯರಿದ್ದಾರೆ. ಈ ತಂಡವು ಕಳವು, ದರೋಡೆ, ಸ್ಪಿರಿಟ್ ಸಾಗಾಟ ಮೊದಲಾದ ಕೃತ್ಯಗಳಲ್ಲಿ ಪ್ರಮುಖವಾಗಿ ನಿರತವಾಗಿದೆ. ಈ ಕೃತ್ಯಗಳನ್ನು ನಡೆಸಿ ತಂಡದ ಸದಸ್ಯರು ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

ತಂಡದ ಸದಸ್ಯರು ನೆಲೆಯೂರದ ಅಲೆಮಾರಿಗಳಂತೆ ಒಂದೇ ಸ್ಥಳದಲ್ಲಿ ಅಲೆದಾಡುತ್ತಾರೆ. ದರೋಡೆ ಮಾಡುವ ಮುಂಚೆ ಸ್ಥಳವನ್ನು ಪರಿಚಯ ಮಾಡಿಕೊಂಡು ಸ್ಕೆಚ್ ಹಾಕುತ್ತಾರೆ. ಮಂಗಳೂರಿನಿಂದ ತಂಡವು ತಂದ ಹಣವನ್ನು ಕಳವು ಮಾಡಲು ಆಟೋ ರಿಕ್ಷಾದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಕಾಸರಗೋಡಿನಿಂದ ಎಲ್ಲಿಗೆ ಹೋದರೆಂಬುದು ಪೊಲೀಸರಿಗೆ ತಿಳಿದಿಲ್ಲ. ಈ ಕೃತ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರ ನೆರವು ಯಾಚಿಸಿದ್ದಾರೆ.

RELATED ARTICLES
- Advertisment -
Google search engine

Most Popular