ದಾವಣಗೆರೆ : ದಾವಣಗೆರೆಯ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ 2023-24ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ದೈವಜ್ಞ ಸಮಾಜದ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ. ಈಗಾಗಲೇ ಪರೀಕ್ಷೆ ಮುಗಿದಿದ್ದು ಸದ್ಯದಲ್ಲೇ ಫಲಿತಾಂಶ ಬರಲಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಈ ಪ್ರತಿಷ್ಠಾನದಿಂದ ಶೇಕಡ 85% ರಷ್ಟು ಫಲಿತಾಂಶ ಪಡೆದ ದೈವಜ್ಞ
ಸಮಾಜದ ಮಕ್ಕಳಿಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿ ಪ್ರದಾನದೊಂದಿಗೆ ಅದ್ದೂರಿಯಾಗಿ ಗೌರವಿಸಿ
ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ತಿಳಿಸಿದ್ದಾರೆ. 2024ರ ಜೂನ್ 16ರಂದು ದಾವಣಗೆರೆಯ ಗೌರಮ್ಮ ನರಹರಿ ಶೇಟ್ ಸಭಾಂಗಣದಲ್ಲಿ ನಾಡಿನ ಖ್ಯಾತ ಹಿರಿಯ ಸಾಹಿತ್ಯ ದಿಗ್ಗಜರಿಂದ ಸನ್ಮಾನಿಸುತ್ತಿರುವ ಈ ಸಂಭ್ರಮದ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗೆ 9341969084, 8147263552 ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು ಎಂದು
ಪ್ರತಿಷ್ಠಾನದ ನಿರ್ದೇಶಕರಾದ ನಲ್ಲೂರು ಲಕ್ಷ್ಮಣ್ರಾವ್ ರೇವಣಕರ್ ವಿನಂತಿಸಿದ್ದಾರೆ.