ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 74ನೇ ದಿನದ ಪ್ರದಕ್ಷಿಣೆಗೆ ದಿನಾಂಕ: 26-08-2024 ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೋಕ್ತೇಸರಾದ ಡಾ. ಕೆ ಸಿ .ನಾಯಕ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿ ಸುಗುಣ ನಾಯಕ್, ಟ್ರಸ್ಟಿ ಶ್ರೀ ಸಂಜೀತ್ ನಾಯಕ್, ಧಾರ್ಮಿಕ ಮುಖಂಡರಾದ ಶ್ರೀ ಮಾಧವ್ ಸುವರ್ಣ , ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ವನಿತ ಪ್ರಸಾದ್,ಆಡಳಿತ ಅಧಿಕಾರಿ ಶ್ರೀ ಆದೀಶ್
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಚ್ .ಕೆ ಪುರುಷೋತ್ತಮ್,ಶ್ರೀ ಕಿರಣ್ ಜೋಗಿ,ಶ್ರೀ ಧನರಾಜ್ ಶೆಟ್ಟಿ,
ನಿರ್ಮಲಾ ಚಂದ್ರಹಾಸ್ ದಂಪತಿಗಳು, ರಾಜೇಶ್, ಗೀತಾಂಜಲಿ ಎಮ್.ಸುವರ್ಣ , ವೀಣಾ ಎಸ್.ಶೆಟ್ಟಿ , ಶಿಲ್ಪಾ ಮಹೇಶ್ ಜತನ್ , ಶ್ರೀ ಸತೀಶ್ ದೇವಾಡಿಗ, ಶಶಾಂಕ್, ಅಂಕಿತ್ ಉಪಸ್ಥಿತರಿದ್ದರು.