ಯುವ ಬರಹಗಾರರಾಗಿ ಸಾಹಿತ್ಯ ಬರವಣಿಗೆಯಲ್ಲಿ ತನ್ನದೇ ಆದ ಹೊಸ ಛಾಪು ಮೂಡಿಸಿ ಮನದ ಭಾವನೆಗಳಿಗೆ ಬರವಣಿಗೆಯ ರೂಪ ಕೊಟ್ಟು ಹಲವಾರೂ ಕವಿತೆಗಳನ್ನು ರಚಿಸುತ್ತಿರುವ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ,ಬೆಂಗಳೂರು ಇವರು ಆಗಸ್ಟ್ 18ರ ರವಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ ಪುಸ್ತಕ ಹಬ್ಬ ಹಾಗೂ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ “ಕಾವ್ಯ ಚೇತನ “ಪ್ರಶಸ್ತಿ ಗೆ ಆಯ್ಕೆ ಮಾಡಿಲಾಗಿದೆ.ಇವರ ಹೆಸರು ಕನ್ನಡ ಬುಕ್ ಆಪ್ ರೆಕಾರ್ಡ್ ಮತ್ತು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ನಲ್ಲೂ ದಾಖಲಾಗಿದೆ.
ಸತೀಶ್ ಬಿಳಿಯೂರು ಇವರು “ಕಾವ್ಯ ಚೇತನ “ಪ್ರಶಸ್ತಿಗೆ ಆಯ್ಕೆ
RELATED ARTICLES