ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿನ ದೊಡ್ಡತಪ್ಪಲೆಯಲ್ಲಿ ಭೂ ಕುಸಿತ ಸಂಭವಿಸಿರುವುದರಿಂದ, ಮಂಗಳೂರಿನಿಂದ ಬೆಂಗಳೂರು ಪ್ರಯಾಣಿಸುವವರು ಸಂಪಾಜೆ, ಮಡಿಕೇರಿ ಮಾರ್ಗವಾಗಿ ತೆರಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.
ಶಿರಾಡಿ ಘಾಟಿಯ ದೊಡ್ಡತಪ್ಪಲೆಯಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತ ಸಂಭವಿಸಿದೆ. ಹೀಗಾಗಿ ಶಿರಾಡಿ ಘಾಟಿ ಬಂದ್ ಆಗಿದೆ. ಮುಂದಿನ ಸೂಚನೆಯವರೆಗೂ ಯಾರೂ ಶಿರಾಡಿ ಘಾಟಿಯಲ್ಲಿ ಹೋಗಬಾರದು ಎಂದು ಅವರು ತಿಳಿಸಿದ್ದಾರೆ. ಮಾಣಿಯಿಂದ ಪುತ್ತೂರು ಹೋಗುವಲ್ಲಿಯೂ ಸಣ್ಣ ಪ್ರಮಾಣದ ಭೂ ಕುಸಿತ ಸಂಭವಿಸಿದ್ದು, ಅದನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಶಿರಾಡಿ ಘಾಟಿ ಬಂದ್ | ಬೆಂಗಳೂರು ಹೋಗುವವರು ಸಂಪಾಜೆ-ಮಡಿಕೇರಿ ಮಾರ್ಗದಲ್ಲಿ ಹೋಗುವಂತೆ ಡೀಸಿ ಸೂಚನೆ
RELATED ARTICLES