ಸೇಲ್ಸ್ಮ್ಯಾನ್, ಪೇಂಟರ್, ಲಾರಿಡ್ರೈವರ್… ಕುಟುಂಬಕ್ಕಾಗಿ ಏನೆಲ್ಲಾ ಮಾಡಿದ ಮನೆಯೊಡೆಯನ ಪತ್ತೆ ಇಲ್ಲ!
ಶಿರೂರು: ಭಾರೀ ಮಳೆಯಿಂದಾಗಿ ಶಿರೂರು ಬಳಿ ಸಂಭವಿಸಿದ ಭಾರೀ ಭೂ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಅರ್ಜುನ್ ಹುಡುಕಾಟ ಇನ್ನೂ ಮುಂದುವರೆದಿದೆ. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಆರಂಭದಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮ್ಯಾನ್ ಆಗಿದ್ದ ಅರ್ಜುನ್, ನಂತರ ಪೇಟಿಂಗ್ ಕೆಲಸಕ್ಕೂ ಹೋಗುತ್ತಿದ್ದರು.
ತನ್ನ ತಂದೆ ಬಾವಿತೋಡುವಾಗ ಬಿದ್ದು, ಗಂಭೀರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಯ ಹೊಣೆ ಅರ್ಜುನ್ ತೆಗೆದುಕೊಂಡಿರುತ್ತಾರೆ. 22ನೇ ವಯಸ್ಸಿನಲ್ಲಿ ಅರ್ಜುನ್ ಕುಟುಂಬ ನಿರ್ವಹಣೆ ಮಾಡಲು ಸಾಕಷ್ಟು ಕಠಿಣ ಕೆಲಸಗಳನ್ನು ಮಾಡುತ್ತಿದ್ದರು. ಬಳಿಕ ಅವರಿಗೆ ವಾಹನಗಳ ಮೇಲೆ ವಿಶೇಷವಾದ ಒಲವು ಮೂಡುತ್ತದೆ. ಹೀಗಾಗಿ ಹೆವಿ ವೆಹಿಕಲ್ ಲೈಸನ್ಸ್ ಮಾಡಿಸಿಕೊಳ್ಳುತ್ತಾರೆ. ಲೈಸೆನ್ಸ್ ಸಿಗುತ್ತಲೇ ಲಾರಿ ಚಾಲಕರಾಗಿ ಕೆಲಸಕ್ಕೆ ಸೇರುತ್ತಾರೆ. ಟ್ರಕ್ ಡ್ರೈವರಾಗಿ ಕೆಲಸಕ್ಕೆ ಸೇರಿದಾಗ ಅರ್ಜುನ್ ಕಾಶ್ಮೀರದಿಂದ ದಕ್ಷಿಣದವರೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು.
2 ವರ್ಷಗಳ ಹಿಂದೆ ಅರ್ಜುನ್ ಕೇರಳದಿಂದ ವಿವಿಧ ಸ್ಥಳಗಳಿಗೆ ಟಿಂಬರ್ ಸಾಗಿಸುವ ಕೆಲಸಕ್ಕೆ ಚಾಲಕನಾಗಿ ಸೇರುತ್ತಾರೆ. ಅದೇ ಕೆಲಸದಲ್ಲಿದ್ದ ಅರುಣ್, ಜುಲೈ 16ರಂದು ಸಾಗರ್ ಕೋಯಾ ಟಿಂಬರ್ಸ್ ಮಾಲಿಕತ್ವದ ಕೆಎ15 ಎ7427 ನೋಂದಣಿಯ ಭಾರತ್ ಬೆಂಜ್ ಲಾರಿಯನ್ನು ಚಲಾಯಿಸಿಕೊಂಡು ಶಿರೂರು ಕಡೆಗೆ ಬಂದಿದ್ದಾರೆ. ಆದರೆ ಈ ವೇಳೆ ಅಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದು ಅರುಣ್ ನಾಪತ್ತೆಯಾಗಿದ್ದಾರೆ.
ಈಗ 30 ವರ್ಷದ ನಾಪತ್ತೆಯಾದ ಅರ್ಜುನ್ಗಾಗಿ ಹುಡುಕಾಟ ನಡೆಯುತ್ತಿದೆ. ತಾಯಿ ಮತ್ತು ಹೆಂಡತಿಯನ್ನು ಹೆಚ್ಚು ಪ್ರೀತಿಸುವ ಅರ್ಜುನ್ ದಿನಕ್ಕೆ ಐದಾರು ಬಾರಿ ಕರೆ ಮಾಡುತ್ತಿದ್ದರಂತೆ. ಆದರೀಗ ಅರ್ಜುನ್ ನಾಪತ್ತೆಯಾದ ಬಳಿಕದಿಂದ ಕುಟುಂಬ ಕಣ್ಣೀರಿನಲ್ಲಿ ಕುಳಿತಿದೆ.
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಇಂದಿಗೆ 10 ದಿನ ಕಳೆದರೂ ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅರ್ಜುನ್ ಚಲಾಯಿಸುತ್ತಿದ್ದ ಲಾರಿ ದಡದಿಂದ 40 ಮೀಟರ್ ದೂರದಲ್ಲಿರುವ ನದಿಯಲ್ಲಿ ಇರುವುದು ಪತ್ತೆಯಾಗಿದೆ. ಮಾಹಿತಿ ಪ್ರಕಾರ 15 ಮೀಟರ್ ಅಳದಲ್ಲಿ ಲಾರಿ ಇದೆ ಎಂದು ಅಂದಾಜಿಸಲಾಗಿದೆ. ಇಂದು ಲಾರಿಯನ್ನು ಮೇಲೆಕೆತ್ತುವಲ್ಲಿ ಪ್ರಯತ್ನ ನಡೆಯಲಿದೆ. ಅದಕ್ಕಾಗಿ ದೆಹಲಿಯಿಂದ ತಜ್ಞರ ತಂಡ ಆಗಮಿಸುತ್ತಿದೆ.
ಶಿರೂರು ದುರಂತ | ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್ಗಾಗಿ ಕಾಯುತ್ತಿದೆ ಕುಟುಂಬ
RELATED ARTICLES