Friday, March 21, 2025
Homeರಾಜಕೀಯಉಡುಪಿ-ಚಿಕ್ಕಮಗಳೂರಿನಲ್ಲಿ ಸ್ವಪಕ್ಷೀಯರ ವಿರೋಧಕ್ಕೆ ಬೆಂಗಳೂರು ಉತ್ತರದಲ್ಲಿ ಖಡಕ್ ಉತ್ತರ ನೀಡಿದ ಶೋಭಾ ಕರಂದ್ಲಾಜೆ!

ಉಡುಪಿ-ಚಿಕ್ಕಮಗಳೂರಿನಲ್ಲಿ ಸ್ವಪಕ್ಷೀಯರ ವಿರೋಧಕ್ಕೆ ಬೆಂಗಳೂರು ಉತ್ತರದಲ್ಲಿ ಖಡಕ್ ಉತ್ತರ ನೀಡಿದ ಶೋಭಾ ಕರಂದ್ಲಾಜೆ!

2,59,000 ಮತಗಳ ಅಂತರದ ಭರ್ಜರಿ ಗೆಲುವು

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಲ್ಲೂ ಭರ್ಜರಿ ಅಂತರದಿಂದ ಗೆಲುವು ಕಂಡಿದ್ದಾರೆ. ಬರೋಬ್ಬರಿ 2,59,476 ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿರುವ ಶೋಭಾ ರಾಜ್ಯದಲ್ಲಿ ಪ್ರಭಾವಿ ಮಹಿಳಾ ನಾಯಕಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಶೋಭಾ ಕರಂದ್ಲಾಜೆ ಇಲ್ಲಿ 9,86,049 ಮತಗಳನ್ನು ಪಡೆದಿದ್ದಾರೆ. ಅವರ ಸಮೀಪದ ಸ್ಪರ್ಧಿ ಕಾಂಗ್ರೆಸ್ಸಿನ ಪ್ರೊ. ಎಂ.ವಿ. ರಾಜೀವ್ ಗೌಡ 7,26,573 ಮತಗಳಿಗೆ ಸೀಮಿತವಾಗಿದ್ದಾರೆ.

ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂದು ಇಲ್ಲೂ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಅದರ ನಡುವೆಯೂ ಎಲ್ಲರ ಮನವೊಲಿಸಿ ಬೆಂಗಳೂರು ಉತ್ತರದಲ್ಲಿ ವಿಜಯ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular