ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಇಲ್ಲಿನ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆಯಾಗಿ 25 ವರ್ಷದ ರಜತ ಮೋಹೋತ್ಸವ ಹಾಗೂ ಆಷಾಢ ಏಕಾದಶೀ ಪ್ರಯುಕ್ತ ಬುಧವಾರ ಬೆಳ್ಳಿಗೆ ಸಾಮೂಹಿಕ ಪ್ರಾರ್ಥನೆ , ಲಕ್ಷ ತುಳಸಿ ಅರ್ಚನೆ , ಶ್ರೀ ದೇವರಿಗೆ ವಿಶೇಷ ಅಲಂಕಾರ , ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ರಾಮ ನಾಮ ಜಪ ನೆಡೆಸಲಾಯಿತು , ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನೆಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮ ಮಂದಿರದಲ್ಲಿ ಪ್ರತಿ ವರ್ಷ ನೆಡೆಯುವ ಲಕ್ಷ ತುಳಸಿ ಅರ್ಚನೆಗೆ ಕಳೆದ 25 ವರ್ಷಗಳಿಂದ ತುಳಸಿ ದಳವನ್ನು ನೀಡಿ ಸಹಕರಿತ್ತಿರುವ ನಾರಾಯಣ ಶೆಣೈ ಗಾವಳಿ , ಸುರೇಂದ್ರ ಕಾಮತ್ ಮರ್ಣೆ, ಯಶವಂತ್ ಕಾಮತ್ ಹೆಬ್ರಿ ,ಉದಯ ಶೆಣೈ ಹೆಬ್ರಿ ಇವರನ್ನು ಗೌರವಿಸಲಾಯಿತು. ಪ್ರಸಿದ್ಧ ಕಲಾವಿದರಾದ ನಾಗೇಶ್ ಅಡ್ಗಾಂವ್ಕರ್, ಪುಣೆ ಮತ್ತು ತಂಡದವರಿಂದ “ಅಭಂಗ ವಾರಿ” ಭಜನಾ ಸಂಕೀರ್ತನ ನೆಡೆಯಿತು .
ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಕೆ ಗೋಕುಲ್ ದಾಸ್ ಪೈ , ವೇ ಮೂ ಚೇಂಪಿ ರಾಮಚಂದ್ರ ಭಟ್ , ಮಂದಿರದ ಅರ್ಚಕರಾದ ಶೈಲೇಶ ಭಟ್, ವಿಶ್ವನಾಥ ಭಟ್, ಸುದೀರ್ ಶೆಣೈ , ಶಾಲಿನಿ ಪೈ , ಜಿ .ಎಸ್.ಬಿ ಸಮಾಜದ ಶ್ರೀ ರಾಮ ಸೇವಾ ಟ್ರಸ್ಟ್ ಸದಸ್ಯರು ,ಜಿ .ಎಸ್.ಬಿ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿ ಸದಸ್ಯರು , ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.