ಹಳೆಯಂಗಡಿ : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿ ಇದರ ಷಷ್ಠಿ ಮಹೋತ್ಸವದ ಪೂರ್ವ ಭಾವಿಯಗಿ ಚಪ್ಪರ ಮುಹೂರ್ತದ ವೈದಿಕ ಕಾರ್ಯಕ್ರಮವು ನ. 15ರಂದು ಪೂರ್ವಾಹ್ನ ದೇವಳದ ಆವರಣದಲ್ಲಿ ಜರಗಿತು. ಪ್ರಧಾನ ಅರ್ಚಕರಾದ ಮಧುಸೂದನ್ ಆಚಾರ್ಯ ಅವರು ವಿಶೇಷ ಪೂಜೆ ಸಲ್ಲಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ, ಸಮಿತಿಯ ಸದಸ್ಯರಾದ ಪುರುಷೋತ್ತಮ್ ಕೋಟ್ಯಾನ್, ಅಶೋಕ್ ಕುಂದರ್,ಸವಿತಾ ಶರತ್ ಬೆಳ್ಳಾಯರು, ಭಾಸ್ಕರ ದೇವಾಡಿಗ ತೋಕೂರು,ಜೀರ್ಣೋದ್ಧಾರ ಸಮಿತಿ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.