Friday, May 23, 2025
HomeUncategorizedಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ - ಉಪ್ಪುಂದ ಇವರ ಆಶ್ರಯದಲ್ಲಿ ಉಪ್ಪುಂದ ಜಾತ್ರೆಯ ಪ್ರಯುಕ್ತ ಹಾಗೂ...

ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ – ಉಪ್ಪುಂದ ಇವರ ಆಶ್ರಯದಲ್ಲಿ ಉಪ್ಪುಂದ ಜಾತ್ರೆಯ ಪ್ರಯುಕ್ತ ಹಾಗೂ 13 ವಾರ್ಷಿಕೋತ್ಸವ ಸಂಭ್ರಮ

ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ – ಉಪ್ಪುಂದ ಇವರ ಆಶ್ರಯದಲ್ಲಿ ಉಪ್ಪುಂದ ಜಾತ್ರೆಯ ಪ್ರಯುಕ್ತ ಹಾಗೂ
13 ವಾರ್ಷಿಕೋತ್ಸವ ಸಂಭ್ರಮ ಉಪ್ಪುಂದ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸತೀಶ್ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಉಪ್ಪುಂದ
ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಸಂಸ್ಥೆ ಹಲವಾರು ವರ್ಷಗಳಿಂದ ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮದ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ ಇನ್ನಷ್ಟು ಸೇವೆಗಳು ಆಗಲಿ ಎಂದು ಶುಭ ಹಾರೈಸಿದರು.

ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಯನ್ನು ಏರ್ಪಡಿಸಿದರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶಂಕರ ಪುರಾಣಿಕರು ಆರ್ಚಕರು, ಮಂಜಣ್ಣ ಖಾರ್ವಿಭಜನಾ ಸಂಕೀರ್ತನೆ, ಕೃಷ್ಣ ದೇವಾಡಿಗ ಪೋಲಿಸ್ ವೃತ್ತಿ ಸೇವೆ ಪರಿಗಣಿಸಿ ಯಕ್ಷಗಾನ ಆಯ್ಕೆ, ರಾಜೇಶ್ ದೇವಾಡಿಗ ಸದಸ್ಯರು ವ್ಯವಸ್ಥಾಪನ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ ಕುಮಾರಿ ತನ್ವಿತಾ .ವಿ, ಅಂತರಾಷ್ಟ್ರೀಯ ಯೋಗ ಪಟು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಂಜುನಾಥ ದೇವಾಡಿಗ ರಥ ಬೀದಿ ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ಸಂಸ್ಥೆ ಅಶಕ್ತರಿಗೆ ಅನಾರೋಗ್ಯ ಪೀಡಿತ ರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದೆ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ಅದೇ ರೀತಿಯಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಆಗಬೇಕಾದರೆ ಇದಕ್ಕೆ ದುರ್ಗಾ ಫ್ರೆಂಡ್ಸ್ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ಪಾತ್ರ ಅಮೂಲ್ಯವಾದದ್ದು ಎಂದರು.

ಮಂಜುನಾಥ ದೇವಾಡಿಗ ರಾಯರಡಿ ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರು ಯು.ಎ ಮಂಜು ದೇವಾಡಿಗ ಅರೆಹಾಡಿ, ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ ಉಪ್ಪುಂದ ಶ್ರೀಮತಿ ಗೌರಿ ದೇವಾಡಿಗ ಮಾಜಿ ಸದಸ್ಯರು, ಜಿಲ್ಲಾ ಪಂಚಾಯತ್ ಉಡುಪಿ, ರಾಜು ಪೂಜಾರಿ ಮಾಜಿ ಅಧ್ಯಕ್ಷರು,ಜಿಲ್ಲಾ ಪಂಚಾಯತ್ ಉಡಪಿ, ನಿರ್ದೇಶಕರು ಎಚ.ಸಿ.ಡಿ.ಸಿ.ಸಿ ಬ್ಯಾಂಕ್ ದೀಪಕ್ ಕುಮಾರ ಶೆಟ್ಟಿ ಅಧ್ಯಕ್ಷರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು, ರವಿ ದೇವಾಡಿಗ ತಲ್ಲೂರು ಉಪಾಧ್ಯಕ್ಷರು ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು, ಜಗದೀಶ್ ದೇವಾಡಿಗ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಬೈಂದೂರು, ಠಾಣಾಧಿಕಾರಿ ತಿಮ್ಮೆಶ್ ಸರ್, ಆನಂದ ಖಾರ್ವಿ ಬಿಜೆಪಿ ರಾಜ್ಯ ಮೀನುಗಾರರ ಪ್ರಕೋಷ್ಠ ಸಮಿತಿ ಸದಸ್ಯರು, ಮದನ್ ಕುಮಾರ್ ಮಾಜಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಬೈಂದೂರು, ಪ್ರೇಮ ದೇವಾಡಿಗ ಸದಸ್ಯರು ಗ್ರಾಮ ಪಂಚಾಯತ ಉಪ್ಪುಂದ, ಉಪಸ್ಥಿತರಿದ್ದರು. ನಾಗೇಶ್ ಮೆಲ್ಮನೆ ಸ್ವಾಗತಿಸಿದರು. ನಾರಾಯಣ ರಾಜು ಸರ್ ನಿರೂಪಿಸಿದರು ಸುಧೀರ್ ಬಾಕಿ ಮನೆ ವಂದಿಸಿದರು.

RELATED ARTICLES
- Advertisment -
Google search engine

Most Popular