ಮುಲ್ಕಿ: ಶ್ರೀ ಗುರು ಸಂತೃಪ್ತಿ ಫಿಲಂಸ್ ಅರ್ಪಿಸುವ ಗಲಾಟೆ ಸಂಸಾರದ ಕನ್ನಡ ಧಾರವಾಹಿಯ ಶುಭ ಮುಹೂರ್ತ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತ ಅರಸರು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಕಲಾವಿದರು ಸೇರಿ ನೂತನ ಕನ್ನಡ ಧಾರಾವಾಹಿ ತೆರೆಗೆ ತರುವ ಕಾರ್ಯಕ್ರಮ ಅಭಿನಂದನೀಯವಾಗಿದ್ದು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ದೇವಸ್ಥಾನದ ಧರ್ಮದರ್ಶಿ, ಮೋಹನ್ ದಾಸ್ ಸುರತ್ಕಲ್ ಶುಭ ಆಶೀರ್ವಾದ ನೀಡಿದರು ಹಿರಿಯ ಸಮಾಜಸೇವಕಿ ಶಾಂಭವಿ ಶೆಟ್ಟಿ ಮುಚ್ಚೂರು, ಕ್ಯಾಮರಾ ಚಾಲನೆ ನೀಡಿದರು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಪ್ರಥಮ ದೃಶ್ಯಕ್ಕೆ ಚಾಲನೆ ನೀಡಿದರು. ಕಿನ್ನಿಗೋಳಿ ರೋಟರಿ ಕ್ಲಬ್ ಮಾಜೀ ಅಧ್ಯಕ್ಷ ಸ್ವರಾಜ್ ಶೆಟ್ಟಿ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಹಿಲ್ಡಾ ಡಿಸೋಜಾ, ಹಿರಿಯ ರಂಗಕರ್ಮಿ ಸುರೇಶ್ ವರ್ಕಾಡಿ, ಕಿರುತೆರೆ ಧಾರವಾಹಿ ನಿರ್ಮಾಪಕ ರೋಶನ್ ಡಿಕ್ರೂಸ್, ರಂಗಭೂಮಿ ಸಿನೆಮಾ ಹಾಗೂ ಕಿರುತೆರೆ ನಟ ನರೇಂದ್ರ ಕೆರೆಕಾಡು, ಸಿನೆಮಾ ನಟ ನಿರ್ದೇಶಕ ದೇವಿಪ್ರಕಾಶ್ ಮಂಗಳೂರು, ಕಿನ್ನಿಗೋಳಿ ವಿಜಯ ಕಲಾವಿದರು ಅಧ್ಯಕ್ಷ ಶರತ್ ಶೆಟ್ಟಿ, ದೇವಿ ಪ್ರಸಾದ್ ಮಂಗಳೂರು, ಗುರು ಸಂತ್ರಪ್ತಿ ಫಿಲಂಸ್ ನ ಹರೀಶ್ ಪಿ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.