
ಕ್ರೈಸ್ತ ಸಮಾಜದ ಪ್ರಮುಖ ಕನ್ನಡ ವಾರಪತ್ರಿಕೆ ತನ್ನ ಇಪ್ಪತ್ತು ವರ್ಷಗಳ ಆಚರಣೆ ಪ್ರಯುಕ್ತ ಶ್ರೀ ಅನ್ನಪೂರ್ಣೇಶ್ವರಿ ಅಂಧರ ಕಲಾಸಂಘ (ರಿ) ಇದಕ್ಕೆ ಸನ್ಮಾನ ಮಾಡಲಿದೆ ಎಂದು ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ತಿಳಿಸಿದ್ದಾರೆ.
ಇಲ್ಲಿಯವರೆಗೆ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಹತ್ತೊಂಬತ್ತು ಸನ್ಮಾನ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ಜನರಿಗೆ ಮತ್ತು ಸಂಸ್ಥೆಗಳಿಗೆ ಮಾಡಲಾಗಿದೆ.
ಮಂಗಳೂರು ಕ್ರೈಸ್ತರ ಇಪ್ಪತ್ತು ವರುಷಗಳಿಂದ ಪ್ರಕಟ ಆಗುವ ಏಕೈಕ ಕನ್ನಡ ವಾರಪತ್ರಿಕೆ ಪಿಂಗಾರ ಪತ್ರಿಕೆ 2004 ಜನವರಿಯ14ರಂದು ಆರಂಭವಾಯಿತು.
ಮೂಡುಬಿದಿರೆಯಲ್ಲಿ ಮೊದಲು ಆರಂಭ ಮಾಡಿ ನಂತರ ದಕ,ಉಡುಪಿ ಕಾಸರಗೋಡು ಜಿಲ್ಲೆಗಳಲ್ಲಿ ವಿಸ್ತಾರವಾದ ಪತ್ರಿಕೆ ಪ್ರಕಟನೆಯ ಸಂಪಾದಕ, ಪ್ರಕಾಶಕರಾದ ರೇಮಂಡ್ ಡಿಕೂನಾ ತಾಕೊಡೆ ಜನವಾಹಿನಿಯಲ್ಲಿ ಮೂಡುಬಿದಿರೆ ವರದಿಗಾರ ಆಗಿದ್ದರು. ಅದು ಪ್ರಕಟನೆ ನಿಲ್ಲುಸಿದಾಗ ನಂತರ ತನ್ನ ಊರಿನ ತಾಕೊಡೆಯ ಮನೆ ಆಸ್ತಿಯನ್ನು ಮಾರಿ ಪತ್ರಿಕೆಗಾಗಿ ಮಂಗಳೂರಿಗೆ ಸ್ಥಳಾಂತರಗೊಂಡರು ಪತ್ರಿಕೆ ಕ್ರೈಸ್ತ ಸಮಾಜಕ್ಕಾಗಿ ಮಾದ್ಯಮ ಕೊಡಲು ಪ್ರಯತ್ನ ಪಟ್ಟರು. ಡಿಜಿಟಲ್ ಮತ್ತು ಕೋವಿಡ್ ಪ್ರಭಾವದಿಂದಾಗಿ ತೊಂದರೆಯಾದರೂ ಛಲದಿಂದ ಇಂದಿಗೂ ನೆಗೆಟಿವ್ ಸುದ್ದಿಯನ್ನು ಮುಟ್ಟದೆ ಯಶಸ್ಸು ಕಂಡವರು.
ಮೂಡುಬಿದಿರೆ ಪ್ರೆಸ್ ಕ್ಲಬ್ ಸಂಸ್ಥಾಪಕರು, ಕಾನೂನು ಪದವೀಧರ, ಪತ್ರಿಕಾ ಎಂಎ ಉನ್ನತ ವ್ಯಾಸಂಗ ಹೊಂದಿರುವ ರೇಮಂಡ್ ತನ್ನ ಪಿಂಗಾರ ಪತ್ರಿಕೆಯ ಇಪ್ಪತ್ತನೆಯ ಆಚರಣೆ ಜುಲೈ 27 ಶನಿವಾರ ಸಂಜೆ 3 ಗಂಟೆಗೆ ನಂತೂರು ಬಳಿಯ ಸಂದೇಶ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಉದ್ಘಾಟಿಸುವರು. ಮಾಜಿ ಸಚಿವ ಆಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ದಕ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮುಖ್ಯ ಅತಿಥಿ ಆಗಿದ್ದಾರೆ.
ಮಾಜಿ ಶಾಸಕ ಜೆ ಆರ್ ಲೋಬೊ ಗೌರವ ಅತಿಥಿ ಆಗಿದ್ದಾರೆ.