ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶೆನ್ (ರಿ ) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ವತಿಯಿಂದ ನಡೆದ ಶಿವ – ಜಯ ಟ್ರೋಫಿ 2025 ಇತ್ತೀಚಿಗೆ ಉಡುಪಿ ಬೀಡಿನ ಗುಡ್ಡೆಯ ಕ್ರೀಡಾಂಗಣದಲ್ಲಿ ನಡೆಯಿತು.
ಶಿವ – ಜಯ ಟ್ರೋಫಿ ಚಾಂಪಿಯನ್ ಮತ್ತು ಬಹುಮಾನ ವಿತರಣೆ. ಸಮಾರೋಪ ಸಮಾರಂಭದಲ್ಲಿ ಉಡುಪಿ ಶಾಸಕರಾದ ಯಶ ಪಾಲ್ ಸುವರ್ಣ ಆಗಮಿಸಿ ಶುಭ ಹಾರೈಸಿದರು , ಶಿವ – ಜಯ ಟ್ರೋಫಿ ಚಾಂಪಿಯನ್ ಟ್ರೋಫಿ ( ನಗದು ರೊ 22, 222 ) ಪಡೆದ ಎಸ್ ಕೆ ಪಿ ಎ ಕಾರ್ಕಳ ತಂಡಕ್ಕೆ ಬಹುಮಾನ ವಿತರಣೆಯನ್ನು ಉಡುಪಿ ಯುವ ಉಧ್ಯಮಿ ಸಮಾಜ ಸೇವಕ ಶ್ರೀ ಕೃಷ್ಣಮೂರ್ತಿ ಆಚಾರ್ಯ ವಿತರಿಸಿದರು , ದ್ವಿತೀಯ ಎಸ್ ಕೆ ಪಿ ಎ ಕಾಪು ತಂಡಕ್ಕೆ ( ಚೆಕ್ 11, 111) ಎಸ್ ಕೆ ಪಿ ಎ ಜಿಲ್ಲಾ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ವಿತರಸಿದರು , ತೃತೀಯ ಬಹುಮಾನ ಬ್ರಹ್ಮಾವರ ತಂಡ ಕ್ಕೆ ( 7,777) ಕಡೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನವೀನ್ ಶೆಟ್ಟಿ ಬಹುಮಾನ ನೀಡಿದರು, 4 ನೇ ಬಹುಮಾನ ಉಡುಪಿ ತಂಡ ಕ್ಕೆ ( 5,555 ) ಪಡೆದುಕೊಂಡಿತ್ತು ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ನವೀನ್ ಬಳ್ಳಾಲ್, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್ ಕೊರಿಯಾ, ರವಿಪ್ರಕಾಶ್ , ಅಜೇಯ ಕುಮಾರ್ ಕಪ್ಪೆಟ್ಟು ರಾಕೇಶ್ ಶೆಟ್ಟಿ ತುಮಕೂರು ,ರಾಘವೇಂದ್ರ ಪಾಟೀಲ್ , ಕ್ರೀಡಾ ಕಾರ್ಯದರ್ಶಿ ಅಶೋಕ್ ಪುತ್ರನ್, ಕೋಶಾಧಿಕಾರಿ ರಮೇಶ್ ಎಳ್ಳೂರು , ವೀಕ್ಷಣೆ ವರದಿಯಲ್ಲಿ ರಾಜ್ ಶೇಖರ್ ಸಹಕರಿಸಿದರು ಇದೇ ವೇದಿಕೆಯಲ್ಲಿ ಛಾಯಾ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿದ ಮಹಿಳೆಯರನ್ನು ಗೌರವಿಸಲಾಯಿತು , ವಿವಿಧ ಭಾಗಗಳಿಂದ ಆಗಮಿಸಿದ 14 ವಲಯದ ನೂರಾರು ಸದಸ್ಯರು ಉಪಸ್ಥಿತರಿದ್ದರು.
ಉಡುಪಿ ವಲಯಾಧ್ಯಕ್ಷ ಸುಧೀರ್ ಎಂ. ಶೆಟ್ಟಿ ಸ್ವಾಗತಿಸಿದರು , ರಾಘವ್ ಸೇರಿಗಾರ ನಿರೂಪಿಸಿದರು. ಕಾರ್ಯದರ್ಶಿ ದಿವಾಕರ ಹಿರಿಯಡಕ ವಂದಿಸಿದರು.