Saturday, April 19, 2025
Homeಉಡುಪಿಸೌತ್ ಕೆನರಾ ಫೋಟೋಗ್ರಾಫರ್ ಉಡುಪಿ ವಲಯ ; ಶಿವ - ಜಯ ಟ್ರೋಫಿ ಚಾಂಪಿಯನ್ ಮತ್ತು...

ಸೌತ್ ಕೆನರಾ ಫೋಟೋಗ್ರಾಫರ್ ಉಡುಪಿ ವಲಯ ; ಶಿವ – ಜಯ ಟ್ರೋಫಿ ಚಾಂಪಿಯನ್ ಮತ್ತು ಬಹುಮಾನ ವಿತರಣೆ

ಉಡುಪಿ: ಸೌತ್ ಕೆನರಾ  ಫೋಟೋಗ್ರಾಫರ್ ಅಸೋಸಿಯೇಶೆನ್ (ರಿ ) ದಕ್ಷಿಣ ಕನ್ನಡ  – ಉಡುಪಿ ಜಿಲ್ಲೆ   ಇದರ ಉಡುಪಿ ವಲಯದ ವತಿಯಿಂದ  ನಡೆದ ಶಿವ – ಜಯ ಟ್ರೋಫಿ 2025   ಇತ್ತೀಚಿಗೆ  ಉಡುಪಿ  ಬೀಡಿನ ಗುಡ್ಡೆಯ ಕ್ರೀಡಾಂಗಣದಲ್ಲಿ ನಡೆಯಿತು.

ಶಿವ – ಜಯ ಟ್ರೋಫಿ  ಚಾಂಪಿಯನ್ ಮತ್ತು ಬಹುಮಾನ ವಿತರಣೆ. ಸಮಾರೋಪ ಸಮಾರಂಭದಲ್ಲಿ  ಉಡುಪಿ ಶಾಸಕರಾದ ಯಶ ಪಾಲ್ ಸುವರ್ಣ ಆಗಮಿಸಿ  ಶುಭ ಹಾರೈಸಿದರು , ಶಿವ – ಜಯ ಟ್ರೋಫಿ  ಚಾಂಪಿಯನ್ ಟ್ರೋಫಿ ( ನಗದು ರೊ  22, 222 ) ಪಡೆದ ಎಸ್ ಕೆ ಪಿ ಎ  ಕಾರ್ಕಳ ತಂಡಕ್ಕೆ ಬಹುಮಾನ ವಿತರಣೆಯನ್ನು ಉಡುಪಿ ಯುವ ಉಧ್ಯಮಿ  ಸಮಾಜ ಸೇವಕ ಶ್ರೀ ಕೃಷ್ಣಮೂರ್ತಿ ಆಚಾರ್ಯ ವಿತರಿಸಿದರು , ದ್ವಿತೀಯ  ಎಸ್ ಕೆ ಪಿ ಎ ಕಾಪು  ತಂಡಕ್ಕೆ ( ಚೆಕ್ 11, 111)  ಎಸ್ ಕೆ ಪಿ ಎ ಜಿಲ್ಲಾ ಅಧ್ಯಕ್ಷರಾದ   ಪದ್ಮಪ್ರಸಾದ್ ಜೈನ್ ವಿತರಸಿದರು , ತೃತೀಯ ಬಹುಮಾನ  ಬ್ರಹ್ಮಾವರ ತಂಡ ಕ್ಕೆ ( 7,777) ಕಡೆಕಾರು ಗ್ರಾಮ ಪಂಚಾಯತ್  ಉಪಾಧ್ಯಕ್ಷರಾದ  ನವೀನ್ ಶೆಟ್ಟಿ ಬಹುಮಾನ ನೀಡಿದರು, 4  ನೇ ಬಹುಮಾನ  ಉಡುಪಿ  ತಂಡ ಕ್ಕೆ  ( 5,555 )  ಪಡೆದುಕೊಂಡಿತ್ತು  ವೇದಿಕೆಯಲ್ಲಿ  ಗೌರವಾಧ್ಯಕ್ಷರಾದ ನವೀನ್‌ ಬಳ್ಳಾಲ್, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್‌‌ ಕೊರಿಯಾ, ರವಿಪ್ರಕಾಶ್ , ಅಜೇಯ  ಕುಮಾರ್ ಕಪ್ಪೆಟ್ಟು ರಾಕೇಶ್ ಶೆಟ್ಟಿ ತುಮಕೂರು  ,ರಾಘವೇಂದ್ರ ಪಾಟೀಲ್ ,  ಕ್ರೀಡಾ  ಕಾರ್ಯದರ್ಶಿ ಅಶೋಕ್‌ ಪುತ್ರನ್‌, ಕೋಶಾಧಿಕಾರಿ ರಮೇಶ್‌ ಎಳ್ಳೂರು , ವೀಕ್ಷಣೆ ವರದಿಯಲ್ಲಿ  ರಾಜ್ ಶೇಖರ್  ಸಹಕರಿಸಿದರು  ಇದೇ  ವೇದಿಕೆಯಲ್ಲಿ  ಛಾಯಾ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿದ ಮಹಿಳೆಯರನ್ನು ಗೌರವಿಸಲಾಯಿತು , ವಿವಿಧ ಭಾಗಗಳಿಂದ ಆಗಮಿಸಿದ  14 ವಲಯದ ನೂರಾರು  ಸದಸ್ಯರು  ಉಪಸ್ಥಿತರಿದ್ದರು.

ಉಡುಪಿ ವಲಯಾಧ್ಯಕ್ಷ ಸುಧೀರ್‌ ಎಂ. ಶೆಟ್ಟಿ ಸ್ವಾಗತಿಸಿದರು , ರಾಘವ್ ಸೇರಿಗಾರ ನಿರೂಪಿಸಿದರು. ಕಾರ್ಯದರ್ಶಿ ದಿವಾಕರ ಹಿರಿಯಡಕ ವಂದಿಸಿದರು.

RELATED ARTICLES
- Advertisment -
Google search engine

Most Popular