Monday, May 12, 2025
Homeಉಡುಪಿಉದ್ಯಾವರ ಶ್ರೀ ಶಂಭುಕಲ್ಲು ಶ್ರೀ ವೀರಭದ್ರ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಉದ್ಯಾವರ ಶ್ರೀ ಶಂಭುಕಲ್ಲು ಶ್ರೀ ವೀರಭದ್ರ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಶಂಕರಪುರ ಕ್ಷೇತ್ರ ಪ್ರದಕ್ಷಿಣೆಯ ಮೂವತ್ತೇಳನೇ ದಿನದ ಪ್ರದಕ್ಷಿಣೆಗೆ ದಿನಾಂಕ: 20-07-2024 ಶನಿವಾರ ಉದ್ಯಾವರ ಶ್ರೀ ಶಂಭುಕಲ್ಲು ಶ್ರೀ ವೀರಭದ್ರ ಮಹಾಕಾಳಿ ದೇವಸ್ಥಾನದ ಅರ್ಚಕರಾದ ಯು.ಲಕ್ಷೀ ನಾರಾಯಣ ಭಟ್ , ಎಸ್. ಸತೀಶ್ ಭಟ್, ಗುಣರಾಜ್ ರಾವ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಜಯ ಕುಮಾರ್, ವಿಶ್ವನಾಥ್ ಕೋಟ್ಯಾನ್, ಸುಧಾಕರ್, ಯು.ಗೋಪಾಲ.ಸೋಮನಾಥ ದೇವಾಡಿಗ, ಮ್ಯಾನಜೇರ್ ನಾಗೇಶ್ ದೇವಾಡಿಗ ಕುಸುಮ ವಿಶ್ವನಾಥ್, ಸಂಜೀವ, ನಾರಾಯಣ , ಯಶೋಧ, ಪಾಂಡುರಂಗ ದೇವಾಡಿಗ, ಉಲ್ಲಾಸ್ ಶೆಟ್ಟಿ, ಗೀತಾಂಜಲಿ.ಎಮ್.ಸುವರ್ಣ, ವೀಣಾ ಎಸ್.ಶೆಟ್ಟಿ, ಲಾವಣ್ಯ ವಿನೋದ್ ಜೋಗಿ, ಪ್ರಜ್ಞಾ ಅರುಣ್, ವಿಜಯ್ ಕುಂದರ್, ಶಶಾಂಕ್ , ಸತೀಶ್ ದೇವಾಡಿಗ ಮತ್ತು ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular