ಉಡುಪಿ : ಆರು ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಮರಳು, ಕೆಂಪುಕಲ್ಲು ಮತ್ತಿತರ ಸಾಮಗ್ರಿ ಸಾಗಾಟದ ವಾಹನಗಳು ಕಡ್ಡಾಯವಾಗಿ ವೇಗ ನಿಯಂತ್ರಕ ಅಳವಡಿಸಬೇಕು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ರ್ನಿಣಯ ಕೈಗೊಳ್ಳಲಾಗಿದ್ದು, ವೇಗ ನಿಯಂತ್ರಕವು 60 ಕಿ.ಮೀ. ವೇಗಕ್ಕೆ ಸೀಮಿತವಾಗಿರಬೇಕು. ವೇಗ ನಿಯಂತ್ರಕ ಅಳವಡಿಕೆಗೆ 10 ದಿನಗಳ ಗಡುವನ್ನೂ ನೀಡಲಾಗಿದೆ. ಈ ಸಂಬಂಧ ಎಲ್ಲ ಲಾರಿ – ಟಿಪ್ಪರ್ ಚಾಲಕ ಮಾಲಕರಿಗೆ ಕರಪತ್ರಗಳನ್ನು ಹಂಚಲಾಗುವುದು. ಜ. 20ರೊಳಗೆ ಎಲ್ಲ ಬಸ್ ಗಳೂ ಕಡ್ಡಾಯವಾಗಿ ಬಾಗಿಲು ಅಳವಡಿಸಿಕೊಳ್ಳಬೇಕು. ತಪ್ಪಿದಲ್ಲಿ ದಂಡ ಸಹಿತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
