ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ,ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಆರಂಭ ಗೊಂಡು 50 ದಿನ ಪೂರೈಸಿದ ಸಲುವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ , ಊರ ಪರಊರ ನೂರಾರು ಭಕ್ತರ ಸಹಕಾರ ದೊಂದಿಗೆ ಹರಿನಾಮ ಸಂಕೀರ್ತನೆ ನಿರಂತರ ನಡೆಯುತ್ತಾ ಇದೆ.
ಶುಕ್ರವಾರ ದೇವಳದ ಸುತ್ತು ಪೌಳಿ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಪಂಚಮ ವರ್ಷದ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮದ ಅಂಗವಾಗಿ , ಸಾನಿಧ್ಯ ಹವನ , ಶ್ರೀದೇವರಿಗೆ ದ್ವಾದಶ ಕಲಶ ಅಭಿಷೇಕ , ಬ್ರಹ್ಮಕಲಶಗಳ ಅಭಿಮಂತ್ರಣ ನಡೆಯಿತು. ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ , ಪರಿವಾರದ ದೇವರಾದ ಗಣಪತಿ , ಲಕ್ಷ್ಮೀ , ಹನುಮಂತ , ಗರುಡ ದೇವರಿಗೆ ಅಭಿಷೇಕ ನಡೆಯಿತು , ಮಹಾಪೂಜೆಯ ಬಳಿಕ ಸಮಾರಾಧನೆ ಜರಗಿತು ರಾತ್ರಿ ಶ್ರೀದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ವೇದ ಮೂರ್ತಿ ಶ್ರೀಕಾಂತ್ ಭಟ್ , ದೇವಳದ ಪ್ರಧಾನ ಅರ್ಚಕರಾದ ದಯಘಾನ್ ಭಟ್ , ವಿನಾಯಕ ಭಟ್ , ಮೇಘಶ್ಯಾಮ್ ಭಟ್ , ದೀಪಕ್ ಭಟ್ , ಗಿರೀಶ್ ಭಟ್ , ಮುಕ್ತೇಸರ ಪಿ ವಿ ಶೆಣೈ , ವಿಶ್ವನಾಥ್ ಭಟ್ , ವಸಂತ್ ಕಿಣೆ , ಗಣೇಶ್ ಕಿಣೆ , ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು , ವಿವಿಧ ಭಜನಾ ಮಂಡಳಿಯ ಸದಸ್ಯರು . ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥಿತರಿದರು.
