ಕಡಬ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಮಾ.29 ರಿಂದ ಏ.3 ರವರೆಗೆ ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಬಿಡುಗಡೆಗೊಳಿಸಿ. ಈ ಬಾರಿಯ ಜಾತ್ರೆಯ ದೇವಸ್ಥಾನದ ಆಡಳಿತಾಧಿಕಾರಿ ಸುಜಾತ ಅವರ ಮುಂದಾಳತ್ವದಲ್ಲಿ ನಡೆಯಲಿದ್ದು, ಕೆಮ್ಮಿಂಜೆ ನಾಗೇಶ್ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಲಿವೆ ಎಂದರು.
ಮಾ.23: ದೈವಗಳಿಗೆ ತಂಬಿಲ ಕಲಶಾಭಿಷೇಕ ಮಾ.23ರಂದು ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಗಣಪತಿ ಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ನಾಗ ತಂಬಿಲ, ದೈವಗ ಳಿಗೆ ತಂಬಿಲ ಕಲಶಾಭಿಷೇಕ ನಡೆಯಲಿದೆ. ಮಾ.24ರಂದು ಗೊನೆ ಮುಹೂರ್ತ. ಮಾ.29ರಂದು ಬೆಳಿಗ್ಗೆ ಊರ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ ನಡೆದು, ರಾತ್ರಿ ಧ್ವಜಾರೋಹಣ ನಡೆಯಲಿದೆ.
ಮಾ.30 ರಂದು ರಾತ್ರಿ ಬಲಿಹೊರಟು ಉತ್ಸವ, ಪೇಟೆ ಸವಾರಿ ನಡೆಯಲಿದೆ. ಮಾ.31ರಂದು ಬೆಳಿಗ್ಗೆ ಉತ್ಸವ ಆರಂಭ, ಮಧ್ಯಾಹ್ನ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ರಾತ್ರಿ ಆನೆಗುಂಡಿ ಯವರೆಗೆ ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಆನೆಗುಂಡಿ ಬೂಡಿನಿಂದ ದುಗಾಲಾಯಿ
ದೈವದ ಭಂಡಾರ ತರುವುದು, ಬಳಿಕ ದೇವಸ್ಥಾನದಲ್ಲಿ ರಂಗಪೂಜೆ ನಡೆಯಲಿದೆ. ಏ.1ರಂದು ಬೆಳಿಗ್ಗೆ, ಸಂಜೆ ಬಲಿಹೊರಟು ಉತ್ಸವ, ರಕ್ತೇಶ್ವರ ಹಾಗೂ ಹುಲಿ ದೈವಗಳ ನುಡಿಕಟ್ಟುಗಳು, ರಾತ್ರಿ ಶ್ರೀ ದೇವರ ಮಹಾ ರಥೋತ್ಸವ, ಬಳಿಕ ಅಶ್ವತ್ಥಕಟ್ಟೆ ಪೂಜೆ ನಡೆಯಲಿದೆ.
ಏ.2ರಂದು ಅವಚ್ಛತೋತ್ಸವ ಏ.2ರಂದು ಬೆಳಗ್ಗೆ ಬಾಗಿಲು ತೆರೆಯುವ ಮುಹೂರ್ತ, ರಾತ್ರಿ ಕುಮಾರಧಾರ ನದಿಯ ಸುದೆಂಗಳದವರೆಗೆ ಪೇಟೆ ಸವಾರಿ ಗುಳಿಗ ಮತ್ತು ಪಂಜುರ್ಲಿ ದೈವಗಳ ನುಡಿಕಟ್ಟುಗಳು, ಅವಭೃತೋತ್ಸವ ನಡೆಯಲಿದೆ. ಏ.3ರಂದು ಶ್ರೀ ದುಗಲಾಯಿ ದೈವದ ನೇಮ ನಡೆಯಲಿದೆ ಎಂದು ಅವರು ವಿವರ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ. ಕಾರ್ಯದರ್ಶಿ ಚೇತನ್ ಆನೆಗುಂಡಿ, ಉಪಾಧ್ಯಕ್ಷರಾದ ಭವಾನಿಶಂಕರ ಗೌಡ ಪರಂಗಾಜೆ, ಬಾಲಕೃಷ್ಣ ಗೌಡ ಬೇಂಗದಪಡು ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಸುಧೀಶ್ ಪಟ್ಟೆ ವಿನಯ ರೈ ಕೊಯಿಲ ಪಟ್ಟೆ ಸಂಜೀವ ಗೌಡ ಕೊನೆಮಜಲು, ವಿನೋಭ ಮಾಳ, ರಾಮಯ್ಯ ಗೌಡ ಬುಡಲೂರು, ಶಾಂತಾರಾಮ ಬೇಂಗದಪಡ್ಪು ರವೀಂದ್ರ ಸಂಕೇಶ, ಲಕ್ಷ್ಮಣ ಆನೆಗುಂಡಿ, ಸಂಜೀವ ಸುದೆಂಗಳ, ರುಕ್ಷಯ್ಯ ಪಲ್ಲಡ್ಕ ಶಶಿಕುಮಾರ್ ಅಂಬಾ ಮತ್ತಿತರರು ಉಪಸ್ಥಿತರಿದ್ದರು.