ದಾವಣಗೆರೆ:ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಆಶ್ರಯದಲ್ಲಿ ಚಾಂದ್ರಮಾನ ಯುಗದಿ ಮತ್ತು ವಿಷ್ಣು ಹಬ್ಬದ ಅಂಗವಾಗಿ “ಕಥಾ ಕುಂಚ” ರಾಜ್ಯ ಮಟ್ಟದ ಉಚಿತ ಕಥಾ ಸ್ಪರ್ಧೆನ್ನು ಅಂತರಾರ್ಜಲ ತಾಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಹಳೆಯ ಕಾಲದ “ಚಂದಮಾಮ” ಶೈಲಿಯಲ್ಲಿ ಮಹಾರಾಜರು, ಜಮೀನ್ದಾರರು, ಕೂಡು ಕುಟುಂಬದ ಕುರಿತು ಅಂದಿನ ರೀತಿ ನೀತಿಗಳು, ವಿದ್ಯಾಭ್ಯಾಸ, ಸಂಸ್ಕೃತಿ, ಸಂಸ್ಕಾರಗಳ ಬೆಳಕು ಚಲ್ಲುವ ಪುರಾತನ ಪರಂಪರೆಗಳ ವಿಷಯಗಳ ಆಯ್ಕೆಯೊಂದಿಗೆ ಸ್ಪರ್ಧಿಗಳು ಕನಿಷ್ಠ 700 ಪದ ಗರಿಷ್ಠ 1000 ಪದಗಳ ಮಿತಿಯೊಂದಿಗೆ ಕಥೆ ರಚಿಸಿ ದಿನಾಂಕ 10-5-2024 ರೊಳಗೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಕಥೆಯನ್ನು ಕಳಿಸಬೇಕು ಎಂದು ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ತಿಳಿಸಿದ್ದಾರೆ. ಕಥೆ ರಚಿಸಿ ಕಳಿಸುವ ಸಂಖ್ಯೆ 8289800677 ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಯಾವುದೇ ಸಭೆ ಸಮಾರಂಭಗಳಿರುವುದಿಲ್ಲ. ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಬಹುಮಾನ ವಿಜೇತರಿಗೆ ಮಾತ್ರ ಅಭಿನಂದನಾ ಪತ್ರ, ಫಲಿತಾಂಶ ಕಳಿಸಲಾಗುವುದು ಎಂದು ತೀರ್ಪುಗಾರರಲ್ಲಿ ಒಬ್ಬರಾದ ಜಯಲಕ್ಷ್ಮೀ ರಾಮಚಂದ್ರ ಹೊಳ್ಳ ತಿಳಿಸಿದ್ದಾರೆ.