ಆರ್.ಪಿ. ಕಲಾ ಸೇವಾ ಟ್ರಸ್ಟ್ ಪಾಂಬಾರು (ರಿ.) ಪುತ್ತೂರು ತಾಲೂಕು, ದ.ಕ. ಕಲೆಯನ್ನು ಉಳಿಸಿ, ಕಲಾವಿದರನ್ನು ಬೆಳೆಸಿ ವತಿಯಿಂದ ಸುರೇಶ್ ಕುಮಾರ್ ಜಿ. ಚಾರ್ವಾಕ ಪಾಲ್ತಿಲ ಸಾಹಿತ್ಯ ಕಿರಣ ಪ್ರಶಸ್ತಿ ದೊರಕಿತು.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಚಾರ್ವಾಕ ಗ್ರಾಮದ ಪಾಲ್ತಿಲ ಶ್ರೀಯುತ ಕುಮಾರ್ ಮತ್ತು ಶ್ರೀಮತಿ ಸರೋಜಿನಿ ಇವರ ಪುತ್ರಇವರ ಆಸಕ್ತಿಗಳು ಗಾಯನ, ಸಾಹಿತ್ಯ, ಭಜನೆ ಪುಸ್ತಕ ಓದುವ ಬಾಲ್ಯದಿಂದ ತೊಡಗಿಸಿಕೊಡಿದ್ದು ಹಲವಾರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಗೂ ಕವಿಗೋಷ್ಟಿಯಲ್ಲಿ ಭಾಗವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಹಲವಾರು ಪ್ರಶಸ್ತಿಗಳು ಮೂಡಿಗೆರಿಸಿಕೊಂಡಿರುತ್ತಾರೆ. ಇವರ ಕಲಾ ಸೇವೆಯನ್ನು ಪರಿಗಣಿಸಿ ಇವರಿಗೆ ಆರ್.ಪಿ. ಕಲಾ ಸೇವಾ ಟ್ರಸ್ಟ್ ವತಿಯಿಂದ ಸಾಹಿತ್ಯ ಕಿರಣ ಪ್ರಶಸ್ತಿ ನೀಡಿ ಗೌರವಿಸಿದೆ.