
ಹಿರ್ಗಾನ: ಮುಂಬಯಿಯ ಕುರ್ಲಾದ ಬಂಟರ ಭವನದಲ್ಲಿ ಜನವರಿ 18, 2025 ರಂದು ಜರುಗಿದ ಮುಂಬಯಿಡ್ ತುಳುನಾಡ್ -2025 ತುಳು ಉತ್ಸವ ಕಾರ್ಯಕ್ರಮವು ನಡೆಯಿತು. ಈ ಸಮಾರಂಭದಲ್ಲಿ ಅನೇಕ ಸಾಧಕರಿಗೆ ತೌಳವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದರಲ್ಲಿ ತುಳುನಾಡಿನ ಹಿರ್ಗಾನ ನೆಲ್ಲಿಕಟ್ಟೆ ಸುಧಾಕರ ಶೆಟ್ಟಿ ಮತ್ತು ಆಶಿತಾ ಕಡಂಬ ದಂಪತಿಗಳು ಈ ಪ್ರಶಸ್ತಿಗೆ ಭಾಜನರಾದರು.
ತುಳುನಾಡಿನ ಹಳೆ ಪರಿಕರಗಳ ಸಂಗ್ರಹ ಮಾಡಿ ಅದನ್ನು ಪ್ರದರ್ಶಿಸಿ ಜನಮೆಚ್ಚುಗೆಯನ್ನು ಪಡೆದಿರುವ ಸುಧಾಕರ ಶೆಟ್ಟಿ, ಮತ್ತು ಆಶಿತಾ ಕಡಂಬ ನೆಲ್ಲಿಕಟ್ಟೆ ದಂಪತಿಗಳಿಗೆ ತೌಳವ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.