Tuesday, April 22, 2025
Homeಮಂಗಳೂರು“ಟೆಕ್ ಯುವ 25” ಮತ್ತು “ಕಲಾಸ್ಪಂದನ-25”

“ಟೆಕ್ ಯುವ 25” ಮತ್ತು “ಕಲಾಸ್ಪಂದನ-25”

ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಮುಕ್ಕ, ಮಂಗಳೂರು

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯು ಕಳೆದ ಹನ್ನೆರಡು ವರ್ಷಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಉದ್ದೇಶದಿಂದ “ಟೆಕ್ ಯುವ” ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವವನ್ನು ಆಯೋಜಿಸುತ್ತಿದೆ. ಈ ವರ್ಷ “ಟೆಕ್ ಯುವ 25” ಕಾರ್ಯಕ್ರಮವನ್ನು ಮಂಗಳವಾರ, ಮಾರ್ಚ್ 11 ಮತ್ತು ಬುಧವಾರ, ಮಾರ್ಚ್ 12 ರಂದು ಆಯೋಜಿಸಲಿದ್ದೇವೆ. ಟೆಕ್ ಯುವದ ಮೊದಲ ಆವೃತ್ತಿಯನ್ನು 2013 ರಲ್ಲಿ ಆಯೋಜಿಸಲಾಗಿತ್ತು.

ಆರಂಭದಿಂದಲೂ, ಪ್ರತಿ ವರ್ಷ, ಕರ್ನಾಟಕ – ಗೋವಾ – ತಮಿಳುನಾಡು – ಕೇರಳ ರಾಜ್ಯಗಳ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 400 ಕ್ಕೂ ಅಧಿಕ ವಿದ್ಯಾರ್ಥಿಗಳು ಟೆಕ್ ಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷಗಳಲ್ಲಿ “ಟೆಕ್ ಯುವ” ಕಾರ್ಯಕ್ರಮವು ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಹೊಂದುವಲ್ಲಿ ನಮ್ಮೊಂದಿಗೆ ಸಹಕರಿಸಿ, ವ್ಯಾಪಕ ಪ್ರಚಾರವನ್ನು ನೀಡಿದ ಮಾಧ್ಯಮ ಮಿತ್ರರಿಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಈ ವರ್ಷದ “ಟೆಕ್ ಯುವ 25” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಐಸ್ಪಿ ಆಗ್ರೋ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಂಗಳೂರಿನ ಅಗ್ರಿಲೀಫ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅವಿನಾಶ್ ರಾವ್ ರವರು ಭಾಗವಹಿಸಿ, ಮಂಗಳವಾರ, ಮಾರ್ಚ್ 11 ರಂದು ಟೆಕ್ ಯುವ 25 ತಾಂತ್ರಿಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ಗುರುವಾರ, ಮಾರ್ಚ್ 13 ರಂದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗಾಗಿ “ಕಲಾಸ್ಪಂದನ-25” ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು, ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರು, ಆಯುಷ್ ಫೌಂಡೇಶನ್ ಅಧ್ಯಕ್ಷರು, ಮತ್ತು ಮಾಲಾಡಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಡಾ. ಆಶಾ ಜ್ಯೋತಿ ರೈ ಯವರು ಭಾಗವಹಿಸಿ, ಕಲಾಸ್ಪಂದನ-25 ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ, ನಟ, ಗೀತೆ ರಚನೆಕಾರರು, ನಾಟಕಕಾರರು, ಸಿನೆಮಾಗಳಲ್ಲಿ ಸ್ಕ್ರಿಪ್ಟ್ ಬರಹಗಾರರು, ಹಾಗೂ ವೃತ್ತಿಯಲ್ಲಿ ವಕೀಲರಾದ ಶಶಿರಾಜ್ ರಾವ್ ಕಾವೂರ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ.ರಾಘವೇಂದ್ರ ರಾವ್ ರವರು ಈ ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರುಗಳಾದ . ಎ. ವಿಜಯಲಕ್ಷ್ಮಿ ಆರ್. ರಾವ್ ಹಾಗೂ ಪ್ರೊ. ಎ. ಮಿತ್ರ ಎಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಡಾ. ಆದಿತ್ಯ ಕುಮಾರ್ ಮಯ್ಯ (ರಿಜಿಸ್ಟ್ರಾರ್ ಅಕಾಡೆಮಿಕ್), ಡಾ. ಅನಿಲ್ ಕುಮಾರ್ (ರಿಜಿಸ್ಟ್ರಾರ್), ಡಾ. ಶ್ರೀನಿವಾಸ ಮಯ್ಯ ಡಿ. (ರಿಜಿಸ್ಟ್ರಾರ್ ಮೌಲ್ಯಮಾಪನ), ಡಾ. ಅಜಯ್ ಕುಮಾರ್ (ರಿಜಿಸ್ಟ್ರಾರ್ ಡೆವಲಪ್‌ಮೆಂಟ್), ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್ ಹೆಗಡೆ, ಟೆಕ್ ಯುವ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಟೆಕ್ ಯುವ-25 ರ ವಿದ್ಯಾರ್ಥಿ ಸಮನ್ವಯಕಾರರಾದ ಮೊಹಮ್ಮದ್ ಸೈಫಾಜ್ ಮತ್ತು ಆಕಾಶ್ ಕುಲಾಲ್, ಕಲಾಸ್ಪಂದನ-25 ರ ಸಂಚಾಲಕರಾದ ಡಾ. ಶ್ವೇತಾ ಪೈ, ವಿದ್ಯಾರ್ಥಿ ಸಮನ್ವಯಕಾರರಾದ ಕಿರಣ್ ಶೆಟ್ಟಿ ಮತ್ತು ಕುಮಾರಿ ವಿನಯಾ ಭಟ್ ಉಪಸ್ಥಿತರಿರಲಿದ್ದಾರೆ. ಟೆಕ್ ಯುವ ಕಾರ್ಯಕ್ರಮದ ಈ  ವರ್ಷದ ಪರಿಕಲ್ಪನೆ “ಆರ್ಟಿಫಿಷಿಯಲ್ ಇಂಟಲಿಜೆನ್ಸ್”. ಕಲಾಸ್ಪಂದನ ಕಾರ್ಯಕ್ರಮದ ಈ  ವರ್ಷದ ಪರಿಕಲ್ಪನೆ “ಮಹಿಳಾ ಸಬಲೀಕರಣ ಮತ್ತು ನಾರಿ ಶಕ್ತಿ”. 

ಈ ವರ್ಷ ನಾವು ಕಲಾಸ್ಪಂದನ ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಒಟ್ಟಿಗೆ ಆಚರಿಸಲಿದ್ದೇವೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಒಂದು ವಾರದ ಸ್ಪರ್ಧೆಯನ್ನು ನಡೆಸಲಿದ್ದೇವೆ. ವಿಜೇತರಿಗೆ, ಕಲಾಸ್ಪಂದನ ಕಾರ್ಯಕ್ರಮದ ದಿನದಂದು ಬಹುಮಾನಗಳನ್ನು ವಿತರಿಸಲಿದ್ದೇವೆ. ಟೆಕ್ ಯುವ 25 ರಲ್ಲಿ ತಾಂತ್ರಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ
50 ಕ್ಕೂ ಅಧಿಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಟೆಕ್ ಯುವ 25 ತಾಂತ್ರಿಕ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1,000 ಇಂಜಿನಿಯರಿಂಗ್, ಡಿಪ್ಲೋಮ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ, ಹಾಗೂ ಸುಮಾರು 3,500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲನೇ ದಿನ, ಮಾರ್ಚ್ 11 ರಂದು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಟೆಕ್ ಸ್ಪಾರ್ಕ್, ಬ್ರಾಂಡ್ ಬಿಲ್ಡರ್, ಬಗ್ ಬೌಂಟಿ, ಪ್ರಾಂಪ್ಟ್ ಇಂಜಿನಿಯರಿಂಗ್, ದಿ ಬಿಸಿನೆಸ್ ಮಾಸ್ಟರ್, ಟೆಕ್ನಿಕಲ್ ಡಿಬೇಟ್, ಟೆಕ್ನೋ ಟಾಂಗಲ್, ಲೋಗೋ ಕ್ವಿಜ್, ಸ್ಟಾರ್ಟ್ ಅಪ್ ಪಿಚ್, ಡಾಡ್ಜ್ ಬಾಲ್, ಜಿಯೋ ಗೆಸ್ಸರ್, ರೋಬೊ ವಾರ್, ಐಡಿಯಾಥಾನ್, ಲೈನ್ ಫಾಲೋವರ್, ಕೋಡ್ ರಿವರ್ಸ್, ಟೆಕ್ ಕ್ವಿಜ್, ಜಸ್ಟ್ ಎ ಮಿನಿಟ್, ಪ್ರಾಜೆಕ್ಟ್ ಎಕ್ಸ್ಪೋ, ಲೋಗೋ ಆರ್ಟ್, ಪರ್ಫೆಕ್ಟ್ ಕೋಡ್, ಮತ್ತಿತರ ತಾಂತ್ರಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಎರಡನೇ ದಿನ, ಮಾರ್ಚ್ 12 ರಂದು ಡಾನ್ಸ್ ಬ್ಯಾಟಲ್, ಗ್ರೂಪ್ ಡ್ಯಾನ್ಸ್, ಮೆಮೆ ಕಾಂಟೆಸ್ಟ್, ಒಬ್ಜೆಕ್ಟ್ ಡ್ರಾಯಿಂಗ್, ಶಾರ್ಟ್ ಫಿಲಂ, ವಾಲಿಬಾಲ್, ಫುಟ್ಬಾಲ್, ರೀಲ್ ಮೇಕಿಂಗ್, ಫೋಟೋಗ್ರಾಫಿ, ಅನಿಮೆ ಕ್ವಿಜ್, ಫ್ರೀ ಫೈರ್, ಫ್ಯಾಷನ್ ಶೋ, ಟ್ರೇಶರ್ ಹಂಟ್, ಕಬಡ್ಡಿ, ಬ್ಯಾಡ್ಮಿಂಟನ್, ಕ್ರಿಕೆಟ್, ಜಂಕ್ ಆರ್ಟ್ ಜಾಮ್, ಕಾಡ್ ಬ್ಯಾಟಲ್, ಬಿಜಿಎಂಐ, ಪೈಂಟಿಂಗ್, ಥ್ರೋಬಾಲ್, ಮೋಕ್ ಪ್ರೆಸ್ ಹಾಗೂ ಇನ್ನಿತರ ವಿವಿಧ ಬಗೆಯ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 

ಕ್ರೀಡೆಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಎರಡೂ ದಿನಗಳ ಕಾಲ ಆಯೋಜಿಸಲಾಗಿದೆ. ಮಾರ್ಚ್ 12 ರಂದು ಪಿಯು ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಾರ್ಚ್ 11 ಮತ್ತು 12 ರಂದು ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ವತಿಯಿಂದ ಪಿಯು ವಿದ್ಯಾರ್ಥಿಗಳಿಗೆ ಹೆಲ್ತ್ ಫೆಸ್ಟ್ (ಆರೋಗ್ಯ ರಕ್ಷಣೆಯ ಭವಿಷ್ಯದ ಕುರಿತಾದ ಕಾರ್ಯಕ್ರಮ) ಮತ್ತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದೆ.

ಈ 3 ದಿನಗಳ ಕಾಲ ನಡೆಯಲಿರುವ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಯಶಸ್ವಿಯಾಗಿ ಮತ್ತು ಸ್ಮರಣೀಯವಾಗಿಸುವ ಆಯೋಜಿಸುವ ಹಂಬಲದೊಂದಿಗೆ, ಟೆಕ್ ಯುವ-25 ಮತ್ತು ಕಲಾಸ್ಪಂದನ-25 ಕಾರ್ಯಕ್ರಮಗಳ ಕುರಿತು ತಮ್ಮ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವನ್ನು ನೀಡುವುದರ ಮೂಲಕ ತಾವು ಸಹಕಾರವನ್ನು ನೀಡಬೇಕು ಎಂದು ವಿನಂತಿಸುತ್ತಿದ್ದೇವೆ. ಮಂಗಳವಾರ, ಮಾರ್ಚ್ 11 ರಂದು ಬೆಳಿಗ್ಗೆ 10.30 ಕ್ಕೆ ಮುಕ್ಕದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಟೆಕ್ ಯುವ-25 ಉದ್ಘಾಟನಾ
ಸಮಾರಂಭಕ್ಕೆ ಹಾಗೂ ಗುರುವಾರ ಮಾರ್ಚ್ 13 ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿರುವ ಕಲಾಸ್ಪಂದನ-25 ಉದ್ಘಾಟನಾ ಸಮಾರಂಭಕ್ಕೆ ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇವೆ.

(1) ಡಾ. ರಾಮಕೃಷ್ಣ ಎನ್ ಹೆಗಡೆ, ಮುಖ್ಯಸ್ಥರು, ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಮುಕ್ಕ (2) ಪ್ರೊ. ಕೆ. ಶ್ರೀನಾಥ್ ರಾವ್, ಸಂಯೋಜಕರು, ಟೆಕ್ ಯುವ-25 (3) ಡಾ. ಶ್ವೇತಾ ಪೈ, ಸಂಯೋಜಕರು, ಕಲಾಸ್ಪಂದನ-25 (4) ಮೊಹಮ್ಮದ್ ಸೈಫಾಜ್, ವಿದ್ಯಾರ್ಥಿ ಸಮನ್ವಯಕಾರರು, ಟೆಕ್ ಯುವ-25 (5) ಆಕಾಶ್ ಕುಲಾಲ್, ವಿದ್ಯಾರ್ಥಿ ಸಹ-ಸಮನ್ವಯಕಾರರು, ಟೆಕ್ ಯುವ-25 (6) ಕಿರಣ್ ಶೆಟ್ಟಿ, ಮತ್ತು ಕುಮಾರಿ ವಿನಯಾ ಭಟ್, ವಿದ್ಯಾರ್ಥಿ ಸಮನ್ವಯಕಾರರು, ಕಲಾಸ್ಪಂದನ-25 (7) ಜಿನೋಯ್, ಮೊಹಮ್ಮದ್ ಮಿಶಾಲ್ ಮತ್ತು ಮೊಹಮ್ಮದ್ ಕೈಫ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು.

RELATED ARTICLES
- Advertisment -
Google search engine

Most Popular