ಮುಂಬೈ: ಪುಣೆ-ಗೋವಾ-ದಕ್ಷಿಣ ಭಾರತಕ್ಕೆ ಸಂಪರ್ಕ ಜೋಡಿಸುವ ಮುಂಬೈನ ಅಟಲ್ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಸುಸೈಡ್ ಮಾಡಿಕೊಳ್ಳುವ ದೃಶ್ಯವುಳ್ಳ ವಿಡಿಯೊ ಒಂದು ವೈರಲ್ ಆಗಿದೆ. ರೀಲ್ಸ್, ಸೆಲ್ಫಿ ಹುಚ್ಚಾಟಗಳಿಗೆ ಸುದ್ದಿಯಾಗಿದ್ದ ಸೇತುವೆ ಈಗ ಸುಸೈಡ್ ಪಾಯಿಂಟ್ ಆಗಿಯೂ ಬದಲಾಗಿದೆ.
38 ವರ್ಷದ ವ್ಯಕ್ತಿಯೊಬ್ಬ ತನ್ನ ಟಾಟಾ ಟೆಕ್ಸಾನ್ ಕಾರಿನಲ್ಲಿ ಬಂದು ಮಾರ್ಗ ಮಧ್ಯೆ ನಿಲ್ಲಿಸಿ, ಸೇತುವೆಯಿಂದ ಸಮುದ್ರಕ್ಕೆ ಹಾರುವ ದೃಶ್ಯ ಸೇತುವೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೊಂಬಿವಿಲಿ ನಿವಾಸಿ ಕೆ. ಶ್ರೀನಿವಾಸನ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜುಲೈ ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದೆ. ಕೆಲವು ದಿನಗಳ ಹಿಂದೆ ವೈದ್ಯೆಯೊಬ್ಬರು ಇದೇ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ..