Tuesday, May 13, 2025
Homeಮಂಗಳೂರುಸನಾತನ ಧರ್ಮ ರಕ್ಷಣೆಗೆ ಮಹಾಸಂಕಲ್ಪದ 19 ಮತ್ತು 20 ದಿನದ ಪ್ರದಕ್ಷಿಣೆ ಯಶಸ್ವಿ

ಸನಾತನ ಧರ್ಮ ರಕ್ಷಣೆಗೆ ಮಹಾಸಂಕಲ್ಪದ 19 ಮತ್ತು 20 ದಿನದ ಪ್ರದಕ್ಷಿಣೆ ಯಶಸ್ವಿ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಹತ್ತೋಂಬತ್ತನೇ ದಿನದ ಪ್ರದಕ್ಷಿಣೆಗೆ 02-07-2024 ಮಂಗಳವಾರ ಕಾಪು ಶ್ರೀ ಹಳೆ ಮಾರಿಗುಡಿ ದೇವಸ್ಥಾನದ ಅರ್ಚಕ ಶ್ರೀನಿವಾಸ್ ಭಟ್, ದೇವಸ್ಥಾನದ ವ್ಯವಸ್ಥಾಪಕರಾದ ಚಂದ್ರಕಾಂತ್ ಕಾಮತ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ, ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ರಾಮ್ ನಾಯಕ್, ಕಾಪು ಪುರಸಭಾ ಸದಸ್ಯ ಅನಿಲ್ ಕುಮಾರ್, ಸಾವಿತ್ರಿ ಗಣೇಶ್, ಗೀತಾಂಜಲಿ ಎಮ್.ಸುವರ್ಣ, ವೀಣಾ. ಎಸ್‌. ಶೆಟ್ಟಿ , ಸುಪ್ರೀಯಾ ಶೆಟ್ಟಿ, ಭವಾನಿ, ಸತೀಶ್ ದೇವಾಡಿಗ, ಪ್ರದೀಪ್, ಶಶಾಂಕ್ , ನಿಲೇಶ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿ,ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಾಯಿ ಈಶ್ವರ್ ಗುರೂಜಿಯವರ ಇಪ್ಪತ್ತನೇ ದಿನದ ಪ್ರದಕ್ಷಿಣೆಗೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಇಪ್ಪತ್ತನೇ ದಿನದ ಪ್ರದಕ್ಷಿಣೆಗೆ ದಿನಾಂಕ: 03-07-2024 ಬುಧವಾರ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅರ್ಚಕರಿಗೆ ಹಾಗೂ ಆಡಳಿತ ಕಮಿಟಿಯ ಸದಸ್ಯರಾದ ಶ್ರೀ ರಮೇಶ್ ಶೆಟ್ಟಿ ಯವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಶ್ರೀಮತಿ ಗೀತಾಂಜಲಿ ಎಮ್.ಸುವರ್ಣ , ಶ್ರೀಮತಿ ವೀಣಾ. ಎಸ್‌. ಶೆಟ್ಟಿ , ಶ್ರೀಮತಿ ಸರೋಜಾ ಶೆಟ್ಟಿಗಾರ್, ಶ್ರೀಮತಿ ದಮಯಂತಿ , ಶ್ರೀಮತಿ ಶೋಭಾ ಶೆಟ್ಟಿ, ಶ್ರೀ ವಿಜಯ ಕುಂದರ್, ಶ್ರೀ ಶಿವದಾಸ್, ಶ್ರೀ ಸತೀಶ್ ದೇವಾಡಿಗ, ಶ್ರೀ ಶಶಾಂಕ್ , ಶ್ರೀ ನಿಲೇಶ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿ,ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular