ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಚಾಲಕರೊಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಬೋಟ್ ಚಾಲಕ ಮನೀಶ್ ಕುಮಾರ್ ದಕ್ಷಿಣ ದಕ್ಕೆಯಲ್ಲಿ ಇರ್ಫಾನ್ ಅವರ ಮಾಲಕತ್ವದ ಕುವತ್ ಹೆಸರಿನ ಬೋಟ್ ಚಾಲಕನಾಗಿ ಮುನೀಶ್ ಕೆಲಸ ಮಾಡಿಕೊಂಡಿದ್ದರು. ಏ 15ರಂದು ರಾತ್ರಿ ಮುನೀಶ್ ಇತರ ಹತ್ತು ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ್ದರು. ಏ 17ರಂದು ಮುನೀಶ್ ಆಯ ತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಬೋಟ್ ನಲ್ಲಿದ್ದ ಇತರರು ಹುಡುಕಾಟ ನಡೆಸಿದರೂ ಮುನೀಶ್ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.