ತುಳುನಾಡು ಒಕ್ಕೂಟ ಸಂಘಟನೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಾಲ್ಕನೇ ವರ್ಷದ ಚೆನ್ನಮಣೆ ಗೊಬ್ಬು ಮತ್ತು ಸಂಧಿ ಪಾರ್ದನ ಸುಗ್ಗಿಪ್ಪು ಆಟ ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಲುನಾಡು ಒಕ್ಕೂಟ ಬೆಳ್ತಂಗಡಿಯ ತಾಲೂಕು ಕೂಟದ ರಾಜೇಶ್ ಕುಲಾಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಲ್ಲಿಕಾ ಪುನೀತ್, ವಿ. ಎನ್. ಕುಲಾಲ್ ವೇಣೂರು, ಅನಿಲ್ ಕುಮಾರ್ ಯು., ರಾಜೇಶ್ ಕಕ್ಯೆಪದವು, ಜಯಾನಂದ ಬಂಗೇರ ಕುವೆತ್ಯಾರು, ನವೀನ್ ಪೂಜಾರಿ ಅಡ್ಕದಬೈಲು, ಉದಯ ಗೋಳಿಯಂಗಡಿ ಉಪಸ್ಥಿತರಿದ್ದರು.
ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸ್ವಾಗತವನ್ನು ರಮೇಶ್ ಅವರು ಮಾಡಿದರು ಧನ್ಯವಾದಗಳು ಆಕಾಶ್ ನೆರವೇರಿಸಿದರು.