Friday, May 23, 2025
Homeಕಾರ್ಕಳಯುವ ಉತ್ಸಾಹಿ ಬಳಗದ ಮನವಿಗೆ ಲೋಕೋಪಯೋಗಿ ಇಲಾಖೆ ಸ್ಪಂದನೆ

ಯುವ ಉತ್ಸಾಹಿ ಬಳಗದ ಮನವಿಗೆ ಲೋಕೋಪಯೋಗಿ ಇಲಾಖೆ ಸ್ಪಂದನೆ

ದ.ಕ ಜಿಲ್ಲೆಯ ‌ಮೂಡುಬಿದಿರೆ ಯಿಂದ ಬೆಳ್ಮಣ್ ಸಂಪರ್ಕಿಸುವ ರಸ್ತೆಯು ಪುತ್ತಿಗೆ ಹಾಗೂ ಪಾಲಡ್ಕ‌ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಳೆಗೆ ಸಂಪೂರ್ಣ ಹದಗೆಟ್ಟಿದ್ದು ಪ್ರತಿದಿನ ಸಂಚರಿಸುವ ಬಸ್ಸು ಹಾಗೂ ವಾಹನ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುವ ಹಿನ್ನೆಲೆಯಲ್ಲಿ ಯುವ ಉತ್ಸಾಹಿ ಬಳಗ(ರಿ‌.) ಕೇಮಾರು ವತಿಯಿಂದ ಜನಸ್ಪಂದನ ಮೂಲಕ ಮನವಿ ಮಾಡಲಾಗಿತ್ತು.

ಈ ಮನವಿ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯು ಮಳೆಯ ಪ್ರಮಾಣ ಕಡಿಮೆಯಾದ ನಂತರ ಡಾಂಬರು ಕಾಮಗಾರಿ ನಿರ್ವಹಿಸಲಾಗುವುದು‌ ಎಂದು ವರದಿಯಲ್ಲಿ ತಿಳಿಸಿದೆ.

ತಕ್ಷಣ ರಸ್ತೆ ದುರಸ್ತಿಯಾಗಿ ನಾಗರಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಯುವ ಉತ್ಸಾಹಿ ಬಳಗದ ಆಶಯ.

RELATED ARTICLES
- Advertisment -
Google search engine

Most Popular