ಮುಂಬೈ: ಈ ವಿಡಿಯೊ ನೋಡಿದರೆ ಎಂತೆಂಥಾ ಕಳ್ಳರಿದ್ದಾರೆ ಎಂದನಿಸದೆ ಇರಲಾರದು. ದೇವರ ಮುಂದೆ ಕೈ ಮುಗಿದು, ಕ್ಷಮೆಯಾಚಿಸಿ ದೇವರ ಬೆಳ್ಳಿಯ ಕಿರೀಟವನ್ನೇ ಎಗರಿಸಿದ ಘಟನೆ ನಡೆದಿದೆ. ಮುಂಬೈನ ಬೊರಿವಿಲಿಯಲ್ಲಿರುವ ವಿಠ್ಠಲ ದೇವಸ್ಥಾನದಲ್ಲಿ ಬುಧವಾರ ಸಂಜೆ ಕಳ್ಳ ಈ ಕೃತ್ಯ ಎಸಗಿದ್ದಾನೆ.
ಸಂಜೆ 5 ಗಂಟೆ ಸುಮಾರಿಗೆ ಭಕ್ತನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಮೊದಲು ದೇವರಿಗೆ ಕೈ ಮುಗಿಯುತ್ತಾನೆ. ಸ್ವಲ್ಪ ಹೊತ್ತು ಏನೋ ಬೇಡಿಕೊಳ್ಳುತ್ತಾನೆ. ಬಳಿಕ ಯಾರೂ ಇಲ್ಲದ್ದನ್ನು ಗಮನಿಸಿ ದೇವರ ತಲೆಯ ಮೇಲಿದ್ದ ಬೆಳ್ಳಿ ಕಿರೀಟವನ್ನು ಎತ್ತಿಕೊಂಡು ಅಲ್ಲಿಂದ ತೆರಳಿದ್ದಾನೆ. ಈ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವುಳ್ಳ ವಿಡಿಯೊವನ್ನು ಸುದ್ದಿ ಸಂಸ್ಥೆ ʻಟೈಮ್ಸ್ ನೌʼ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ದೇವಸ್ಥಾನದ ಆಡಳಿತ ಮಂಡಳಿ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ವಿಡಿಯೊ ನೋಡಲು ಲಿಂಕ್ ಕ್ಲಿಕ್ ಮಾಡಿ…