Tuesday, April 22, 2025
Homeಮೂಡುಬಿದಿರೆಪುತ್ತಿಗೆ ಒಬ್ಬೆಟ್ಟುಪಲ್ಕೆಯಲ್ಲಿ ಜುಗಾರಿ ಅಡ್ಡೆಗೆ ದಾಳಿ: ಮೂವರು ಆರೋಪಿಗಳು ಪೊಲೀಸ್ ವಶ

ಪುತ್ತಿಗೆ ಒಬ್ಬೆಟ್ಟುಪಲ್ಕೆಯಲ್ಲಿ ಜುಗಾರಿ ಅಡ್ಡೆಗೆ ದಾಳಿ: ಮೂವರು ಆರೋಪಿಗಳು ಪೊಲೀಸ್ ವಶ

ಮೂಡುಬಿದಿರೆ: ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಒಬ್ಬೆಟ್ಟುಪಲ್ಕೆ ಬಳಿಯಿರುವ ಗುಡ್ಡೆಯಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು, ಸೋಮವಾರ ರಾತ್ರಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಒಬ್ಬೆಟ್ಟುಪಲ್ಕೆ ಬಳಿ ಗುಡ್ಡೆಯಲ್ಲಿ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ದಾಳಿ ನಡೆಸಿದ ಪೊಲೀಸರು ಉಲಾಯಿ-ಪಿದಾಯಿ ಆಟದಲ್ಲಿ ನಿರತರಾಗಿದ್ದ ರಾಜೇಶ್ ಪೂಜಾರಿ, ರಮೇಶ್ ಭಂಡಾರಿ ಮತ್ತು ಓಸ್ವಲ್ಡ್ ಪಿಂಟೋ ಎಂಬುವರನ್ನು ಸಿಬ್ಬಂದಿಗಳ ಸಹಾಯದಿಂದ ಸುತ್ತುವರೆದು ಹಿಡಿದಿದ್ದಾರೆ. ಪ್ರೇಮ್ ಕುಮಾರ್, ಕಿರಣ್ ಮತ್ತು ಜೀವನ್ ಬಳ್ಳಾಲ್ ಎಂಬವರು ಓಡಿಹೋಗಿದ್ದಾರೆ. ಜುಗಾರಿ ಆಟಕ್ಕೆ ಉಪಯೋಗಿಸಿದ 3 ಸಾವಿರ ರೂ.ನಗದು, 52 ಇಸ್ಪೀಟ್ ಎಲೆಗಳು, 2 ಮೇಣದ ಬತ್ತಿ ಹಾಗೂ 2 ವಾಹನಗಳನ್ನು ಮಹಜರು ಮೂಲಕ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular