Monday, May 12, 2025
Homeರಾಜ್ಯಮಂಗಳಮುಖಿಯ ಬೆತ್ತಲುಗೊಳಿಸಿ, ಮರ್ಮಾಂಗಕ್ಕೆ ಒದ್ದು, ಖಾರದಪುಡಿ ಎರಚಿ ಹಲ್ಲೆಗೈದು ದಾಂಧಲೆ!

ಮಂಗಳಮುಖಿಯ ಬೆತ್ತಲುಗೊಳಿಸಿ, ಮರ್ಮಾಂಗಕ್ಕೆ ಒದ್ದು, ಖಾರದಪುಡಿ ಎರಚಿ ಹಲ್ಲೆಗೈದು ದಾಂಧಲೆ!

ವಿಜಯಪುರ: ಸಾರ್ವಜನಿಕ ಸ್ಥಳದಲ್ಲಿ ಮಂಗಳಮುಖಿಯೊಬ್ಬಳನ್ನು ಇತರ ಮಂಗಳಮುಖಿಯರು ಬೆತ್ತಲೆಗೊಳಿಸಿ, ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ನಗರ ಬಸ್ಸು ನಿಲ್ದಾಣ ಬಳಿಯ ಲಲಿತ ಮಹಲ್ ಹೋಟೆಲ್ ಮುಂಭಾಗ ಘಟನೆ ನಡೆದಿದೆ. ಮಂಗಳಮುಖಿ ಅಂತ ಹೇಳಿಕೊಂಡು ಹಣ ಕೇಳುತ್ತೀಯಾ ಅಂತ ಏಳೆಂಟು ಮಂಗಳಮುಖಿಯರು ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಒದ್ದು, ಖಾರದಪುಡಿ ಎರಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ಅಂಗಲಾಚಿ ಬೇಡಿಕೊಂಡರು ಸಹ ಮಂಗಳಮುಖಿಯರು ಬಿಟ್ಟಿಲ್ಲ. ಅಲ್ಲದೆ ತಮ್ಮ ಮರ್ಮಾಂಗ ತೋರಿಸಿ ಮಂಗಳಮುಖಿಯರು ವಿಕೃತಿ ಮೆರೆದಿದ್ದಾರೆ. ಮಂಗಳಮುಖಿಯರು ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 15 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

RELATED ARTICLES
- Advertisment -
Google search engine

Most Popular