Monday, May 12, 2025
Homeಪುತ್ತೂರುತುಳುಕೂಟ ಸಮಿತಿ ಮೆಣಸಿನಕಾನ - ದೇಲಂಪಾಡಿ ಉದ್ಘಾಟನೆ: 'ತುಳು ಐಸಿರೊ-2024' ಕಾರ್ಯಕ್ರಮ

ತುಳುಕೂಟ ಸಮಿತಿ ಮೆಣಸಿನಕಾನ – ದೇಲಂಪಾಡಿ ಉದ್ಘಾಟನೆ: ‘ತುಳು ಐಸಿರೊ-2024’ ಕಾರ್ಯಕ್ರಮ

ದೇಲಂಪಾಡಿ: ದಿನಾಂಕ 31-3-2024ರಂದು ದೇಲಂಪಾಡಿ ಗ್ರಾಮದ ಮೆಣಸಿನಕಾನದ ಶ್ರೀ ಧೂಮಾವತಿ ಸಹಪರಿವಾರ ದೈವಸ್ಥಾನ ನೆಲ್ಲಿಂಜಗುತ್ತು ತರವಾಡು ಮನೆಯ ವಠಾರದಲ್ಲಿ ‘ತುಳುಕೂಟ ಸಮಿತಿ ಮೆಣಸಿನಕಾನ – ದೇಲಂಪಾಡಿ ಉದ್ಘಾಟನೆ’ ಮತ್ತು ‘ತುಳು ಐಸಿರೊ -2024’ ಕಾರ್ಯಕ್ರಮವು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ವಿವಿಧ ಜಾನಪದ ಸಾಂಸ್ಕೃತಿಕ ಕ್ರೀಡಾಕೂಟಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶ್ರೀ ರವಿಕಿರಣ ಶೆಟ್ಟಿ ಬೆದ್ರಾಡಿಯವರು ದೀಪ ಬೆಳಗಿಸಿ ತುಳು ಬಾಂಧವರಿಗೊಸ್ಕರ ನಡೆಸಿದ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಆಟೋಟ ಸ್ಪರ್ಧೆಗಳನ್ನು ನಡೆಸಲು ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಕುಕ್ಕುಪುಣಿ ಮತ್ತು ಪ್ರಸಾದ್ ಯಾದವ್ ಚಿಮಿಣಿಗುಡ್ಡೆ ಇವರು ನಿರ್ಣಾಯಕರಾಗಿ ಸಹಕಾರ ನೀಡಿದರು.

ಮಧ್ಯಾಹ್ನ ಭೋಜನದ ನಂತರ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿಯವರು ಪಂಚವಟಿ – ಶೂರ್ಪನಖಿ ಮಾನಭಂಗ, ಖರಾಸುರ ವಧೆ ಎಂಬ ತುಳು ಯಕ್ಷಗಾನ ತಾಳಮದ್ದಲೆ ಪ್ರಸಂಗ ನಡೆಸಿಕೊಟ್ಟರು.

ಸಂಜೆ 5 ಗಂಟೆಗೆ ಸರಿಯಾಗಿ ಪೂರ್ಣಕುಂಭ ಮತ್ತು ಕುಣಿತಭಜನೆಯೊಂದಿಗೆ ಪರಮ ಪೂಜ್ಯ ಸ್ವಾಮೀಜಿಯವರನ್ನು ಬರಮಾಡಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಸಿ ತುಳು ಭಾಷೆ, ಸಂಸ್ಕೃತಿ, ಆಚಾರ- ವಿಚಾರ ಉಳಿಸುವಲ್ಲಿ ಈ ತುಳುಕೂಟದ ಶ್ರಮ ಯಶಸ್ವಿಯಾಗಲಿ, ಇನ್ನಷ್ಟು ಪ್ರೋತ್ಸಾಹ ಸಿಗಲಿ ಎಂದು ಆಶೀರ್ವದಿಸಿದರು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಲಿಂಜಗುತ್ತು ಸದಾಶಿವ ರೈ ತಾಳತ್‌ಮನೆಯವರು ವಹಿಸಿದರು. ಕುಂಬ್ರ ದುರ್ಗಾಪ್ರಸಾದ್ ರೈ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮನಾಥ ಶೆಟ್ಟಿ ಸಂಚಾಲಕರು, ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ಶ್ರೀಕೃಷ್ಣ ಭಟ್ ಮುಂಡ್ಯ, ರವಿ ಮುಗೇರ ನಿಕಟಪೂರ್ವ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ಮುಖೇಶ್ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು, ಕಳುವಾಜೆ ವೆಂಕಟ್ರಮಣ ಗೌಡ ಅಧ್ಯಕ್ಷರು ಎ.ವಿ.ಜಿ. ಶಾಲೆ ಬನ್ನೂರು ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.

ನಾರಾಯಣ ನಾಯ್ಕ್ ಊಜಂಪಾಡಿ, ನಾರಾಯಣ ರೈ ಕಟ್ಟೆ ಕುದ್ಕಾಡಿ, ಶಿವರಾಮ ಕಲ್ಲೂರಾಯ ಕಲ್ಲಡ್ಕ, ಸದಾಶಿವ ರೈ ಬೆಳ್ಳಿಪ್ಪಾಡಿ ಗುತ್ತು, ಸತ್ಯನಾರಾಯಣ ಮನೋಳಿತ್ತಾಯ ಎಂಕಣಮೂಲೆ, ಜಯಪ್ರಕಾಶ್ ರೈ ನೂಜಿಬೈಲು, ಗಿರೀಶ್ ರೈ ಮರಕ್ಕಡ, ದೇವದಾಸ್ ಶೆಟ್ಟಿ ಪೆರುವಾಜೆ ಉಪಸ್ಥಿತರಿದ್ದರು.

ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೃಷಿ ಕಾರ್ಯಕ್ಷೇತ್ರಗಳಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡ ಪಕ್ಕೀರ ಅಂದಿತಿರಿಯನ್ ಮೆಣಸಿನಕಾನ, ಮಂಜಪ್ಪ ಪೂಜಾರಿ ಊಜಂಪಾಡಿ, ಕಿಟ್ಟಣ್ಣ ರೈ ಮೆಣಸಿನಕಾನ, ಶಾಂತಪ್ಪ ರೈ ಮುದಿಯಾರು, ನಾರಾಯಣ ನಾಯಕ್ ಮೆಣಸಿನಕಾನ, ಬಾಬು ಗೌಡ ಮೆಣಸಿನಕಾನ, ಗೋಪಾಲ ಮಣಿಯಾಣಿ ಊಜಂಪಾಡಿ, ಅಪ್ಪಯ ನಾಯ್ಕ ಶಾಂತಿಮಲೆ, ಶ್ರೀಮತಿ ರೇವತಿ ವಾಲ್ತಾಜೆ, ಕುಂಞಣ್ಣ ರೈ ಬೆಳ್ಳಾರೆ, ವಿಶ್ವನಾಥ ರೈ ಊಜಂಪಾಡಿ, ವಸಂತ ರೈ ಶಾಂತಿಮಲೆ, ಹರೀಶ್ ಭಂಡಾರಿ ಕೌಡೂರು ಬೀಡು, ಬೊಲ್ಪಾರು ರಾಧಾಕೃಷ್ಣ ರೈ ಮುದಿಯಾರು, ರುಕ್ಮಯ ಅಜಲಾಯ ಮಯ್ಯಾಳ, ಊಜಂಪಾಡಿ ರಾಮ ಇವರನ್ನು ಪರಮ ಪೂಜ್ಯ ಶ್ರೀಗಳು ಸನ್ಮಾನ ಮಾಡಿದರು.

ಬೆಳಿಗ್ಗೆ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾ. ವಿದ್ಯಾ ಮೋಹನದಾಸ್ ರೈ ರತ್ನಾ ಕ್ಲಿನಿಕ್ ಬೆಳ್ಳೂರು ಬಹುಮಾನ ವಿತರಿಸಿ ಶುಭಕೋರಿದರು. ವಿವಿಧ ಧಾರ್ಮಿಕ, ಕೃಷಿ, ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಗಣ್ಯರನ್ನು ಪೂಜ್ಯ ಸ್ವಾಮೀಜಿಯವರು ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಿದರು. ದೇಲಂಪಾಡಿ ಪರಿಸರದ ತರವಾಡು ಮನೆಗಳ ಹಿರಿಯರನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ತುಳುಕೂಟ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮಹಿತ ರೈ ಕಾರ್ಯಕ್ರಮಕ್ಕೆ ಶುಭಾಸಂಶನೆಗೈದರು. ಸಮಿತಿಯ ಕಾರ್ಯಾಧ್ಯಕ್ಷರಾದ ಕೊರಗಪ್ಪ ರೈ ಮಯ್ಯಾಳ ಸ್ವಾಗತಿಸಿ, ಸಮಿತಿಯ ಕೋಶಾಧ್ಯಕ್ಷರಾದ ಸಂಪತ್ ರೈ ಊಜಂಪಾಡಿ ಧನ್ಯವಾದ ಸಲ್ಲಿದರು. ಸಮಿತಿಯ ಪದಾಧಿಕಾರಿಗಳಾದ ಹರ್ಷಿತ್ ರೈ ಮೆಣಸಿನಕಾನ, ಕೆ ರಾಮಯ್ಯ ರೈ ಕಲ್ಲಡ್ಕಗುತ್ತು, ಸೀತಾರಾಮ ರೈ ಕಲ್ಲಡ್ಕಗುತ್ತು, ದೇವಪ್ಪ ಗೌಡ ಸಿ ಯೆಚ್, ವೀಣಾ ಮೆಣಸಿನಕಾನ, ಸವಿತಾ ಮೆಣಸಿನಕಾನ, ಮೋಹನ ಮೆಣಸಿನಕಾನ , ರಾಜೇಶ್ ಮಯ್ಯಾಳ, ವೇಣು ಶಾಂತಿಮಲೆ, ಹರೀಶ್ ಮೆಣಸಿನಕಾನ, ಲೋಕೇಶ್ ಗೌರಿಮೂಲೆ, ಮೋಹನ ವಾಲ್ತಾಜೆ, ರತ್ನಾಕರ ರೈ ಮುದಿಯಾರು, ಮೋಹನದಾಸ್ ರೈ ಮುದಿಯಾರು, ಬಾಳಪ್ಪ ಕನ್ನಂಗೊಳು, ಚರಣ್ ಗೌಡ ವಲ್ತಾಜೆ, ಜಗದೀಶ್ ರೈ ಕಲ್ಲಡ್ಕ, ಬಾಬು ಊಜಂಪಾಡಿ, ರವಿ ರೈ ಮೆಣಸಿನಕಾನ ಹಾಗೂ ಸರ್ವ ಸದಸ್ಯರು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ತುಳು ಲಿಪಿ ಶಿಕ್ಷಕಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ವಿದ್ಯಾಶ್ರೀ ಯಸ್ ತುಳುನಾಡ್ ಕಾರ್ಯಕ್ರಮ ನಿರೂಪಿಸಿದರು.

ರಾತ್ರಿಯ ಭೋಜನದ ಬಳಿಕ ಶ್ರೀ ಕೋದಂಡರಾಮ ಭಜನಾ ಮಂಡಳಿ ಸದಸ್ಯರಿಂದ ನೃತ್ಯ ವೈವಿಧ್ಯ ಮತ್ತು ಮಂಜು ಬಳಗ ಸುಳ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತಂಡದಿಂದ ತುಳು ನಾಡ ವೈಭವ ಹಾಗೂ ತುಳು ನೃತ್ಯ ಸಂಗಮ ಕಾರ್ಯಕ್ರಮದೊಂದಿಗೆ ತುಳುಕೂಟ ಸಮಿತಿಯ ತುಳು ಐಸಿರೊ ಕಾರ್ಯಕ್ರಮ ಮೇಳೈಸಿತು.

RELATED ARTICLES
- Advertisment -
Google search engine

Most Popular