ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಇಪ್ಪತ್ತನಾಲ್ಕನೇ ದಿನದ ಪ್ರದಕ್ಷಿಣೆಗೆ ದಿನಾಂಕ: 07-07-2024 ಆದಿತ್ಯವಾರ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನ ಅರ್ಚಕರಾದ ಶ್ರೀ ಮಹೇಶ್ ಭಟ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತುಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಹರೀಶ್ ಶೆಟ್ಟಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಆಧಿನಾಥೇಶ್ವರ ದೇವಸ್ಥಾನ ಅಧ್ಯಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಯುತ ರಾಜೀವ ಆಳ್ವ ಅದ್ಯಪಾಡಿಗುತ್ತು, ಶಿವಪ್ಪ ಬಂಗೇರ, ಸುಕೇಶ್ ಮಣಾಯ್, ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶೋಧನ್ ಅದ್ಯಪಾಡಿ, ಭರತ್ ಆಳ್ವ ಮರವೂರು, ಕುಮಾರ್ ಶೆಟ್ಟಿ ಬಾಸ್ಕರ ಅದ್ಯಪಾಡಿ, ಚಂದ್ರಹಾಸ ದೇವಾಡಿಗ, ನವೀನ್ ಕುಲಾಲ್, ಮನೋಜ್ ಶೋಧನ್ ಶೆಟ್ಟಿ, ರಾಜೇಶ್ ಶೆಟ್ಟಿ, ನಾಗೇಶ್ ಕುಲಾಲ್ ಅದ್ಯಪಾಡಿ, ರಿತೇಶ್ ಶೆಟ್ಟಿ, ನಿತೇಶ್ ಶೆಟ್ಟಿ, ನಾಗೇಶ್, ಪುರುಷೋತ್ತಮ ಕುಲಾಲ್ ಮೂಡುಶೆಡ್ಡೆ, ಕೃಷ್ಣವನ ಬಾಲಗೋಕುಲದ ಮಾತೆಯರು ಮತ್ತು ಮಕ್ಕಳು, ವಿಜಯ ಕುಂದರ್, ಸತೀಶ್ ದೇವಾಡಿಗ, ಶಶಾಂಕ್, ಭಕ್ತರು ಉಪಸ್ಥಿತರಿದ್ದರು.