Saturday, April 19, 2025
Homeಉಡುಪಿಉಡುಪಿ: (ಎ ಸಿ ಸಿ ಇ ಎ) ರಜತ ಮೊಹೋತ್ಸವದ ಪ್ರಯುಕ್ತ ಮೀಟ್ ಮತ್ತು ಗ್ರೀಟ್...

ಉಡುಪಿ: (ಎ ಸಿ ಸಿ ಇ ಎ) ರಜತ ಮೊಹೋತ್ಸವದ ಪ್ರಯುಕ್ತ ಮೀಟ್ ಮತ್ತು ಗ್ರೀಟ್ ಹಾಗೂ ಸೌಲಭ್ಯಗಳ ಮಾಹಿತಿ

ಅಸೋಸಿಯೇಷನ್ ಓಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಮತ್ತು ಅರ್ಚಿಟೆಕ್ಟ್ಸ್ (ರಿ ) ಉಡುಪಿ ವತಿಯಿಂದ – ಸಂಸ್ಥೆಯ  ರಜತ ಮೊಹೋತ್ಸವದ  ಪ್ರಯುಕ್ತ  ಮೀಟ್ ಮತ್ತು ಗ್ರೀಟ್  ಕಾರ್ಯಕ್ರಮ  ಬುಧವಾರ  ಕಡಿಯಾಳಿ  ಹೋಟೆಲ್  ಓಷನ್ ಪರ್ಲ್ ಸಭಾಂಗಣದಲ್ಲಿ   ನಡೆಯಿತು. 

ಮುಖ್ಯ ಅತಿಥಿ ಮಂಗಳೂರಿನ  ಎಸ್ ಎಸ್ ನಾಯಕ್ ಮತ್ತು ಅಸೋಸಿಯೇಟ್ಸ್  ಮುಖ್ಯಸ್ಥರಾದ  ಸಿ  ಎ  ಎಸ್ ಎಸ್  ನಾಯಕ್ ರವರು  ದೀಪ  ಬೆಳಗಿಸಿ ಚಾಲನೆ ನೀಡಿ  ಉಡುಪಿ ಪ್ರಗತಿ ಹೊಂದಲು ಎಂಜಿನಿಯರ್ಸಗಳ ಕೊಡುಗೆಅಪಾರವಾದದ್ದು . ಯುವ ಇಂಜಿನಿಯರ್  ದೊಡ್ಡ ನಗರಕ್ಕೆ , ವಿದೇಶಕ್ಕೆ  ವಲಸೆ ಹೋಗುವುದನ್ನು  ನಿಲ್ಲಿಸಿ , ಊರಿನಲ್ಲಿ ಇದ್ದು  ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಬಹುದು . ಕೇಂದ್ರ , ರಾಜ್ಯ  ಸರಕಾರದ  ವಿವಿಧ ಯೋಜನೆಯ  ಬ್ಯಾಂಕ  ಸಾಲ ಸೌಲಭ್ಯ ಗಳ ಮಾಹಿತಿ ನೀಡಿದರು , ಯುವ ಜನಾಂಗದವರು ನಿರ್ಮಾಣ ಕ್ಷೇತ್ರಕ್ಕೆಬೇಕಾದ  ಉತ್ಪನ್ನಗಳನ್ನು ( ಹೋಲೊ ಬ್ಲಾಕ್ , ಟೈಲ್ಸ್ , ಪಿ ವಿ ಸಿ  ಪೈಪ್ ಗಳಂಥ  ಗುಣಮಟ್ಟದ  ವಿವಿಧ ವಸ್ತು ತಯಾರಿಕೆ  ಮಾಡಿ ನೀವುಗಳು  ಸರ್ ಎಂ.ವಿಶ್ವೇಶ್ವರಯ್ಯರ ತರಹ  ಸಾಧಕ ಎಂಜಿನಿಯರ್ ಗಳಾಗಿ  ಮೂಡಿ ಬರಬೇಕು ಎಂದು ಶುಭ ಹಾರೈಸಿದರು . ಸಂಸ್ಥೆಯ ವತಿಯಿಂದ C A  ಎಸ್ ಎಸ್  ನಾಯಕ್ ರವರನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ಉಡುಪಿ  (ಎ ಸಿ ಸಿ ಇ ಎ)  ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ , ಲಯನ್ ವಿಜೇಯ ಶೆಟ್ಟಿ , ನಿಕಟ ಪೂರ್ವ ಅಧ್ಯಕ್ಷರಾದ  ಪಾಂಡುರಂಗ ಆಚಾರ್ಯ , ಮಾಜಿ ಅಧ್ಯಕ್ಷರಾದ  ಗೋಪಾಲ್ ಭಟ್ , ಹಾಗೂ  ನೂರಾರು ಇಂಜಿನಿಯರ್ಸ್ ಉಪಸ್ಥಿತರಿದ್ದರು.                                                                                                                                                                                                                    ಅಧ್ಯಕ್ಷರಾದ  ಆರ್  ಯೋಗೀಶ್ ಚಂದ್ರಾ ಧಾರ ಸ್ವಾಗತಿಸಿದರು , ಖಚಾಂಚಿ ಅಮಿತ್ ಅರವಿಂದ್ ನಾಯಕ್  ಕಾರ್ಯಕ್ರಮ ನಿರೂಪಣೆಗೈದರು , ಕಾರ್ಯದರ್ಶಿ ಮಹೇಶ್ ಕಾಮತ್  ವಂದಿಸಿದರು. ಸಂಸ್ಥೆಯ ಸದ್ಯಸರಿಂದ ಮನೋರಂಜನೆ ಕಾರ್ಯಕ್ರಮ ಜರಗಿತು.

RELATED ARTICLES
- Advertisment -
Google search engine

Most Popular