ಉಡುಪಿ : ಮೇ 24 ರಂದು ರಾತ್ರಿ ಸುರಿದ ಬಾರಿ ಮಳೆಗೆ ಉಡುಪಿ ನಗರದ ಹಳೇ ಬಸ್ ನಿಲ್ದಾಣ ಸಮೀಪದ ಕೃಷ್ಣಾ ಕಾಂಪ್ಲೆಕ್ಸ್ ಶ್ರೀ ನಾಗ ದೇವರ ಸನ್ನಿಧಿಯ ಪಕ್ಕದ 100 ಮೀ ಆವರಣದ ಗೋಡೆ ಕುಸಿದು (ದ್ವಿಚಕ್ರ) 3 ವಾಹನ ಸಂಪೂರ್ಣ ಜಖಂ ಗೊಂಡಿದೆ. ಸಾವಿರಾರು ರೂ. ನಷ್ಟ ವಾಗಿದೆ, ಸಮೀಪದ 2 ಅಂಗಡಿಗೆ ಮಳೆಯ ನೀರು ನುಗ್ಗಿ ಸ್ವಲ್ಪ ಪ್ರಮಾಣದ ಹಾನಿಯಾಗಿದೆ . ಇದು ಬೋರ್ಡ್ ಶಾಲೆಯ ಆವರಣದ ಗೋಡೆ ಯಾಗಿದ್ದು ಈ ಹಿಂದೆಯೂ ಎರಡು ಬಾರಿ ಆವರಣ ಗೋಡೆ ಕುಸಿದು ಹಾನಿಯಾಗಿದ್ದು ಇದೂವರೆಗೆ ಪರಿಹಾರ ದೊರೆತ್ತಿಲ್ಲ, ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಕಿಸಿ ಕೊಡುವಂತೆ ಕೃಷ್ಣಾ ಕಾಂಪ್ಲೆಕ್ಸ್ ವರ್ತಕ ಸಂಘ ಆಗ್ರಹಿಸಿದೆ.