ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಖಂಬದಕೋಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಂಬದಕೋಣೆ ನಾರಾಯಣ ಶೆಟ್ಟಿ ಇವರ ಮನೆಗೆ “ಸ್ವಾತಂತ್ರ್ಯ ಹೋರಾಟಗಾರರ ಮನೆ” ನಾಮ ಫಲಕ ಅನಾವರಣ
ಸ್ವರಾಜ್ಯ ೭೫ ತಂಡ ದ 34ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮ , ಜೊತೆಯಾದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪ್ರಥಮ ದಜೆ೯ ಕಾಲೇಜು ಬೈಂದೂರು ,ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ,ಸಮೃದ್ಥ ಜನಸೇವಾ ಚಾರಿಟೇಬಲ್ ಟ್ರಸ್ಟ್ ರಿ ಬೈಂದೂರು, ಕಾಯ೯ಕ್ರಮ ನಮ್ಮೊಂದಿಗೆ (“ಸ್ವರಾಜ್ಯ ೭೫ ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.
ಕಾಯ೯ಕ್ರಮದ ಮೊದಲಿಗೆ ರಾಷ್ಟ್ರ ಧ್ವಜಕ್ಕೆ ಪುಷ್ಪಾಚ೯ನೆಯನ್ನು ನವೀನ್ ಹೆಚ್ ಜೆ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಗಣ್ಯರು ಪುಷ್ಪಾರ್ಚನೆ ಗೈದರು
ಕಾಯ೯ಕ್ರಮ ದಲ್ಲಿ ಕನಾ೯ಟಕ ಇತಿಹಾಸ ಅಕಾದೆಮಿ ರಾಜ್ಯ ಸಮಿತಿ ಸದಸ್ಯರು ಎಸ್.ವೈ. ನಿಮ೯ಲಾ ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ರ ಕೊಡುಗೆಯೊಂದಿಗೆ ಖಂಬದಕೋಣೆ ನಾರಾಯಣ ಶೆಟ್ಟಿ ಸ್ವಾತಂತ್ರ್ಯ ಹೋರಾಟದ ವಿಚಾರವನ್ನು ಸುಜಯ್ ಶೆಟ್ಟಿ ಹಳ್ನಾಡು ಪ್ರಸ್ತುತಪಡಿಸಿದರು.
ಗಣ್ಯರಾಗಿ ಚಂದು ಕುಲಾಲ್, ಲಕ್ಷ್ಮೀ ಶೆಡ್ತಿ ಹಂಚಿಕೊಂಡರು
ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಗಣೇಶ್ ದೇವಾಡಿಗ ಹೊಳ್ಳರು
ವಹಿಸಿದ್ದರು.
ಕಾಯ೯ಕ್ರಮದಲ್ಲಿ ಶ್ರೀಪತಿ ಆಚಾಯ೯, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಧ್ಯಾಥಿ೯ಗಳು ,ಕುಟುಂಬಸ್ಥರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ವಿಚಾರವನ್ನು ಕಾಯ೯ಕ್ರಮ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು.ನಿರೂಪಣೆಯನ್ನು ,
ಶ್ವೇತಾ ಬಂಕೇಶ್ವರ ಧನ್ಯವಾದವನ್ನು ಆಶಿತಾ ತಗ್ಗಸೆ೯ ನಡೆಸಿದರು.