Saturday, May 24, 2025
Homeತುಳುನಾಡುಉಡುಪಿ: ತುಳುನಾಡು ರಕ್ಷಣಾ ವೇದಿಕೆ ವಿವಿಧ ಘಟಕಗಳ ಮಹಾಸಭೆ

ಉಡುಪಿ: ತುಳುನಾಡು ರಕ್ಷಣಾ ವೇದಿಕೆ ವಿವಿಧ ಘಟಕಗಳ ಮಹಾಸಭೆ

ಉಡುಪಿ: ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವಿವಿಧ ಘಟಕಗಳ (ಮಹಿಳಾ ಘಟಕ, ಯುವ ಘಟಕ, ಕಾರ್ಮಿಕ ಘಟಕ ಜಂಟಿ) ಮಹಾಸಭೆ ನಡೆಯಿತು. ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಮಣ್ಯ ನಗರ, ವಿವಿಧ ಘಟಕಗಳ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಮಹಿಳಾ ಘಟಕ ಸಭೆ ಅಧ್ಯಕ್ಷೆ ಶೋಭಾ ಪಾಂಗಳ, ಕಾರ್ಮಿಕ ಘಟಕ ಸಭೆ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ, ಯುವ ಘಟಕ ‌ಸಭೆ ಅಧ್ಯಕ್ಷ ವೇಣು ಪೂಜಾರಿ, ಅವರುಗಳು ವಿವಿಧ ಘಟಕಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ವಿವಿಧ ಘಟಕಗಳ ಪ್ರಮುಖ ಸದಸ್ಯರುಗಳು ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರು ಅಧ್ಯಕ್ಷತೆಯಲ್ಲಿ ಸೇರಿ ಮಹಾಸಭೆ ನಡೆಯಿತು.

ಉಡುಪಿ ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳ ಸಾಮೂಹಿಕ ಕೂಡುವಿಕೆ ಕಾರ್ಯಕ್ರಮವಾಗಿ ರೂಪುಗೊಂಡು ಜಿಲ್ಲೆಯ ಪ್ರಮುಖ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು. ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ಜಿಲ್ಲಾ ಘಟಕ ಮಹಿಳಾ ಘಟಕ ಯುವ ಘಟಕ ಕಾರ್ಮಿಕ ಘಟಕ ಪದಾಧಿಕಾರಿಗಳು ಸಂಘಟನೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಭೇಟಿ ಮಾಡಲು ಸಮಯ ಮತ್ತು ವಾರ ಗೊತ್ತುಪಡಿಸಿ ನೋಟಿಸ್ ಬೋರ್ಡ್ ನಲ್ಲಿ ಹಾಕುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಉಡುಪಿ ತಾಲೂಕು ಮಾಜಿ ಪ್ರಧಾನ ಕಾರ್ಯದರ್ಶಿ ಸುನಿಲ್ ಫೆರ್ನಾಂಡಿಸ್ ಮರುಸೇರ್ಪಡೆ ಘೋಷಣೆ ಮಾಡಿ ಸಾಲು ಹಾಕಿ ಸ್ವಾಗತಿಸಿದರು. ಬಳಿಕ ಯುವ ಘಟಕ ಜಿಲ್ಲಾ ಉಪಾಧ್ಯಕ್ಷ ರಾಹುಲ್ ಪೂಜಾರಿ ಅವರ ಹುಟ್ಟುಹಬ್ಬ ಆಚರಣೆ ಕೂಡ ನಡೆಯಿತು.
ಸಭೆಯಲ್ಲಿ ಗೌರವ ಸಲಹೆಗಾರ ಸುಧಾಕರ್ ಅಮೀನ್, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ,
ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ರೋಷನ್ ಅಮ್ಮುಂಜೆ, ಜಿಲ್ಲಾ ಜೊತೆ ಕಾರ್ಯದರ್ಶಿ ಸುಭಾಷ್ ಸುಧನ್, ಆಟೋ ಘಟಕ ಅಧ್ಯಕ್ಷ ಅನಿಲ್ ಪೂಜಾರಿ, ಯುವ ಘಟಕ ಉಪಾಧ್ಯಕ್ಷ ರಾಹುಲ್ ಪೂಜಾರಿ ಮಹಿಳಾ ಕೋಶಾಧಿಕಾರಿ ಸುನಂದ ಟೀಚರ್, ಗುಲಾಬಿ, ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಲ್ ಅಮೀನ್, ಯುವ ಘಟಕ ಉಪಾಧ್ಯಕ್ಷ ರೋಷನ್ ಬಂಗೇರ, ಕ್ರೀಡಾ ಕಾರ್ಯದರ್ಶಿ ಅವಿನಾಶ್, ಮಹಿಳಾ ಉಪಾಧ್ಯಕ್ಷೆ ಶಾಂಭವಿ, ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ಪ್ರೀತಮ್, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಾಸ್ಟರ್, ನಿರ್ಮಲ ಮೆಂಡನ್, ಲಕ್ಷ್ಮಿ ಆದಿ ಉಡುಪಿ, ಜ್ಯೋತಿ, ಬೀರಪ್ಪ, ಲಕ್ಷ್ಮಿಬಾಯಿ, ಸಂಗೀತ, ರೇಣುಕಾ ಮತ್ತಿತರ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular