Friday, May 23, 2025
Homeಧಾರ್ಮಿಕಉದ್ಯಾವರ: ಪುನ‌ರ್ ಪ್ರತಿಷ್ಠೆ ಮನವಿ ಪತ್ರ ಬಿಡುಗಡೆ

ಉದ್ಯಾವರ: ಪುನ‌ರ್ ಪ್ರತಿಷ್ಠೆ ಮನವಿ ಪತ್ರ ಬಿಡುಗಡೆ

ಕಟಪಾಡಿ: ಉದ್ಯಾವರ ಶಂಭುಕಲ್ಲು ಶ್ರೀವೀರಭದ್ರ / ದುರ್ಗಾಪರಮೇಶ್ವರಿ ಗಣಪತಿ ಮಹಾಕಾಳಿ ಪಂಜುರ್ಲಿ ದೇವಸ್ಥಾನದ ನಾಗಬನ ಜೀರ್ಣೋದ್ಧಾರ, ಪುನರ್ ಪ್ರತಿಷ್ಠೆ, ಆಶ್ಲೇಷ ಬಲಿಪೂಜೆ, ನಾಗದರ್ಶನ ಕಾರ್ಯಕ್ರಮಗಳ ಮನವಿ ಪತ್ರ ಬಿಡುಗಡೆ ಶುಕ್ರವಾರ ನಡೆಯಿತು. ದೇವಸ್ಥಾನದ ತಂತ್ರಿಗಳಾದ ಕೆ.ಎಸ್. ಕೃಷ್ಣಮೂರ್ತಿ ತಂತ್ರಿ, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್, ಅರ್ಚಕರಾದ ಯು. ಶ್ರೀನಿವಾಸ ಮೂರ್ತಿ ಭಟ್, ಸತೀಶ್ ಭಟ್, ಆಡಳಿತ ಮಂಡಳಿ ಸದಸ್ಯರಾದ ಯು. ಗೋಪಾಲ ದೇವಾಡಿಗ, ವಿಶ್ವನಾಥ ಕೋಟ್ಯಾನ್ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಶಿಲಾಮಯ ಆರೂಢದೊಂದಿಗೆ ಜೀರ್ಣೋದ್ಧಾರಗೊಳ್ಳಲಿರುವ ನಾಗ ಬನದ ಪುನರ್‌ಪ್ರತಿಷ್ಠೆ, ಆಶ್ಲೇಷಾ ಬಲಿ ಪೂಜೆ, ನಾಗದರ್ಶನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಮೇ 2ರಂದು ದೇವಸ್ಥಾನದ ತಂತ್ರಿಗಳಾದ ವೇ.ಮೂ.ಕೆ.ಎಸ್. ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪಟೇಲರಮನೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular