Friday, March 21, 2025
Homeಮಂಗಳೂರುಉಪ್ಪಿನಂಗಡಿ : ಬಿಳಿಯೂರು ಡ್ಯಾಂನಿಂದ ಎಎಂಆರ್ ಜಲಾಶಯಕ್ಕೆ ನೀರು: ಕೃಷಿ, ಕೈಗಾರಿಕೆ ಬಳಕೆಗೆ ನಿಷೇಧ: ಮುಲ್ಲೈ...

ಉಪ್ಪಿನಂಗಡಿ : ಬಿಳಿಯೂರು ಡ್ಯಾಂನಿಂದ ಎಎಂಆರ್ ಜಲಾಶಯಕ್ಕೆ ನೀರು: ಕೃಷಿ, ಕೈಗಾರಿಕೆ ಬಳಕೆಗೆ ನಿಷೇಧ: ಮುಲ್ಲೈ ಮುಗಿಲನ್

ಮಂಗಳೂರು: ಕುಡಿಯುವ ನೀರು ಮಿತವಾಗಿ ಬಳಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಾಗರಿಕರನ್ನು ವಿನಂತಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಬಿಳಿಯೂರು ಜಲಾಶಯದಿಂದ ಎಎಂಆರ್ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಕೃಷಿ ಮತ್ತು ಕೈಗಾರಿಕೆಗಳಿಗೆ ಎಎಂಆರ್ ಜಲಾಶಯದ ನೀರು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಲ್ಲೈ ಮುಗಿಲನ್ ಹೇಳಿದ್ದಾರೆ. ಎಎಂಆರ್ ಜಲಾಶಯದ ನೀರು ಗ್ರಾಮೀಣ ಪ್ರದೇಶಗಳಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಉಪ್ಪಿನಂಗಡಿ ಬಳಿಯ ಬಿಳಿಯೂರು ಜಲಾಶಯದಿಂದ ಎಎಂಆರ್ ಜಲಾಶಯಕ್ಕೆ ಗುರುವಾರ ಬೆಳಿಗ್ಗೆಯಿಂದ ನೀರು ಹರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ನಾಗರಿಕರು ನೀರನ್ನು ಮಿತವಾಗಿ ಬಳಸಬೇಕು. ಮಳೆ ಬರುವವರೆಗೂ ಕೃಷಿ ಮತ್ತು ಕೈಗಾರಿಕೆಗಳವರು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular