Friday, May 16, 2025
HomeUncategorizedಮತದಾನಕ್ಕೆ ಬಹಿಷ್ಕಾರ: ಆಕ್ರೋಶಿತ ಗುಂಪಿನಿಂದ ಮತಗಟ್ಟೆ ಧ್ವಂಸ

ಮತದಾನಕ್ಕೆ ಬಹಿಷ್ಕಾರ: ಆಕ್ರೋಶಿತ ಗುಂಪಿನಿಂದ ಮತಗಟ್ಟೆ ಧ್ವಂಸ

ಚಾಮರಾಜನಗರ: ಮತದಾನ ಬಹಿಷ್ಕಾರ ಹಾಕಿದ್ದ ಮತದಾರರನ್ನು ಓಲೈಸಲು ಯತ್ನಿಸಿದ್ದ ಅಧಿಕಾರಿಗಳ ಮಾತಿನಿಂದ ಕೆರಳಿದ ಗುಂಪೊಂದು ಮಾತಿನ ಚಕಮಕಿ ನಡೆಸಿ, ಮತಗಟ್ಟೆ ಧ್ವಂಸಗೊಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.

ಹನೂರು ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕೊರತೆಯ ಹಿನ್ನೆಲೆಯಲ್ಲಿ ಮತದಾರರು ಮತದಾನ ಬಹಿಷ್ಕಾರ ಮುಂದಾಗಿದ್ದರು. ಇದನ್ನು ತಿಳಿದ ತಹಾಶೀಲ್ದಾರ್ ಗುರುಪ್ರಸಾದ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಉಮೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಮತದಾರರನ್ನು ಮನವೊಲಿಸಲು ಮುಂದಾದರು. ಮತ ಚಲಾವಣೆಗೆ ಬಂದ ಮತದಾರರನ್ನು ಕಂಡು ಕೆರಳಿದ ಮತ್ತೊಂದು ಗುಂಪಿನವರು ಮಾತಿನ ಚಕಮಕಿ ನಡೆದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಕೆಲವರು ಮತಗಟ್ಟೆಗೆ ನುಗ್ಗಿ ಇವಿಎಂ ಅನ್ನು ನಾಶ ಮಾಡಿ, ಮತಗಟ್ಟೆ ಧ್ವಂಸ ಮಾಡಿದರು ಎಂದು ವರದಿಗಳಾಗಿವೆ.   

RELATED ARTICLES
- Advertisment -
Google search engine

Most Popular