ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ಮಂಜೇಶ್ವರದ ಹೊಸಂಗಡಿಯಲ್ಲಿ ಕಳೆದ 26 ವರುಷಗಳಿಂದ ಕಾರ್ಯಾಚರಿಸುತ್ತಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ದಿನಾಂಕ 13/04/2024ನೇ ಶನಿವಾರದಂದು ಮತದಾನ ಜಾಗ್ರತಿ ಕಾರ್ಯಾಗಾರ ನಡೆಸಲಾಯಿತು. ಈ ಸಂದರ್ಭದಲ್ಲಿ ವೈದ್ಯರಾದ ಡಾ ಮುರಲೀ ಮೋಹನ್ ಚೂಂತಾರು, ಡಾ ರಾಜಶ್ರೀ ಮೋಹನ್, ಡಾ ಇಜಾಜ್ ಅಹಮದ್ ಮತ್ತು ದಂತ ಪರಿಚಾರಿಕೆಯರಾದ ರಮ್ಯಾ, ಚೈತ್ರ, ಜಯಶ್ರೀ ಮತ್ತು ಸುಷ್ಮಿತಾ ಉಪಸ್ಥಿತರಿದ್ದರು. ವಿಶೇಷವಾಗಿ ಹೊಸ ಮತದಾರರಿಗೆ ಮತದಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಮತದಾನದ ಮಹತ್ವವನ್ನು ತಿಳಿಸಿ ಹೇಳಲಾಯಿತು. ದಿನವಿಡೀ ಈ ಮತದಾನ ಜಾಗ್ರತಿ ಕಾರ್ಯಾಗಾರ ನಡೆಯಿತು.