Friday, March 21, 2025
HomeUncategorizedಆ ಒಂದು ಮೆಸೇಜ್‌ ಆತನ ಪ್ರಾಣ ಉಳಿಸಿತು | ವಯನಾಡ್‌ ದುರಂತದಲ್ಲಿ ಸಾವನ್ನೇ ಗೆದ್ದು ಬಂದ...

ಆ ಒಂದು ಮೆಸೇಜ್‌ ಆತನ ಪ್ರಾಣ ಉಳಿಸಿತು | ವಯನಾಡ್‌ ದುರಂತದಲ್ಲಿ ಸಾವನ್ನೇ ಗೆದ್ದು ಬಂದ ಬೆಂಗಳೂರಿನ ಕಾರು ಚಾಲಕ!

ವಯನಾಡ್: ಕೇರಳದ ವಯನಾಡಿನಲ್ಲಿ ಮೊನ್ನೆ ರಾತ್ರಿ ಸಂಭವಿಸಿದ ಭಯಾನಕ ಭೂಕುಸಿತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಭೀಕರ ಭೂಕುಸಿತಕ್ಕೆ ಮೃತರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ. 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ, ಪವಾಡ ಸದೃಶ ರೀತಿಯಲ್ಲಿ ಕನ್ನಡಿಗರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೇ ಒಂದು ಮೆಸೇಜ್​ನಿಂದ ಅವರ ಪ್ರಾಣ ಉಳಿದಿದೆ.

ಬೆಂಗಳೂರಿನ ಮಂಜುನಾಥ್ ಎಂಬವರು ಟ್ಯಾಕ್ಸಿ ಡ್ರೈವರ್ ಆಗಿ ವಯನಾಡ್​ಗೆ ಹೋಗಿದ್ದರು. ಉತ್ತರ ಭಾರತದ ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರನ್ನು ವಯನಾಡ್​ಗೆ ಟ್ರಿಪ್ ಗೆ ಕರೆದೊಯ್ದಿದ್ದರು. ಆ ನಾಲ್ವರು ವಯನಾಡ್​ನ ರೆಸಾರ್ಟ್ ಒಂದರಲ್ಲಿ ಇದ್ದರಂತೆ. ಆದರೆ ಮಂಜುನಾಥ್ ಕಾರು ನಿಲ್ಲಿಸಿ ಅಲ್ಲೇ ನಿದ್ದೆಗೆ ಜಾರಿದ್ದರಂತೆ. ಮಧ್ಯರಾತ್ರಿ 1.15ಕ್ಕೆ ಭೂ ಕುಸಿತವಾಗಿದೆ. ಆಗ ರೆಸಾರ್ಟ್​ನಲ್ಲಿದ್ದ ಹಲವರಿಗೆ ಸಂಕಷ್ಟ ಎದುರಾಗಿದೆ. ಆದರೆ ಇದ್ಯಾವುದರ ಪರಿವೇ ಇಲ್ಲದೆ ಮಂಜುನಾಥ್​ ಗಾಢ ನಿದ್ದೆಗೆ ಜಾರಿದ್ದರಂತೆ.

ಭೂ ಕುಸಿತದ ಬಳಿಕ ನೀರು ವೇಗವಾಗಿ ಹರಿಯುತ್ತಿತ್ತು. ಆಗ ಮಂಜುನಾಥ್​ ಅವರ ಕಾರಿಗೂ ಜಲದಿಗ್ಬಂಧನ ಉಂಟಾಗಿದೆ. ಈ ವೇಳೆ ಚಾಲಕ ತರಾತುರಿಯಲ್ಲಿ ಕಾರನ್ನು ಚಲಾಯಿಸಲು ಮುಂದಾಗಿದ್ದಾನೆ. ಕಾರು ಸ್ಟಾರ್ಟ್​ ಆಗುತ್ತಿದ್ದಂತೆ ಓನರ್ ಸಚಿನ್​​ಗೆ ಮೆಸೇಜ್ ಹೋಗಿದೆ. ಕಾರಿನ ಜಿಪಿಎಸ್​ ಆನ್ ಆಗುತ್ತಿದ್ದಂತೆ ಮೊಬೈಲ್​ನಲ್ಲಿ ಓನರ್‌ಗೆ ಆಟೋಮ್ಯಾಟಿಕ್ ಮೆಸೇಜ್ ಹೋಗಿದೆ. ಹೊತ್ತಲ್ಲದ ಹೊತ್ತಲ್ಲಿ ಗಾಡಿ ಆನ್ ಆದ ಮೆಸೇಜ್ ನೋಡಿ ಓನರ್ ಶಾಕ್​ ಆಗಿದ್ದಾರೆ. ಕೂಡಲೇ ಓನರ್​ ಸಚಿನ್​ ಚಾಲಕ ಮಂಜುನಾಥ್​ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಪ್ರವಾಹದ ಬಗ್ಗೆ ಚಾಲಕ ವಿವರಿಸಿದ್ದಾರೆ. ಆ ಕೂಡಲೇ ಚಾಲಕ ಮಂಜುನಾಥ್​ಗೆ ಸಚಿನ್ ಧೈರ್ಯ ತುಂಬಿದ್ದಾರೆ. ಅದೇ ಜಾಗದಲ್ಲಿದ್ದ ತನ್ನ ಪರಿಚಯಸ್ಥರಿಗೂ ಮಾಹಿತಿ ನೀಡಿದ್ದಾರೆ. ಇದರಿಂದ ಅಲ್ಲಿನ ಜನರು ಚಾಲಕನ ಸಹಾಯಕ್ಕೆ ದೌಡಾಯಿಸಿದ್ದಾರೆ. ಹೀಗಾಗಿ ಒಂದೇ ಒಂದು ಮೆಸೇಜ್​ನಿಂದ ಕಾರು ಚಾಲಕ ಪಾರಾಗಿದ್ದಾನೆ.

ಚಾಲಕ ಮಂಜುನಾಥ್ ಸೇರಿ ಒಟ್ಟು ಐದು ಮಂದಿ ವಯನಾಡ್​ಗೆ ಹೋಗಿದ್ದರು. ಆದರೆ ತನ್ನ ಟ್ಯಾಕ್ಸಿಯಲ್ಲಿ ಹೋದ ಇಬ್ಬರು ಕಣ್ಮರೆಯಾಗಿದ್ದಾರೆ. ಸದ್ಯ ಇಬ್ಬರು ಯುವತಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಯುವತಿಗೆ ಐಸಿಯು, ಇನ್ನೊಬ್ಬ ಯುವತಿಗೆ ಎಮರ್ಜೆನ್ಸಿ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES
- Advertisment -
Google search engine

Most Popular