Friday, May 23, 2025
Homeರಾಜ್ಯಸಾಂಸ್ಕೃತಿಕ ಚಟುವಟಿಕೆಗಳಿಂದ ಮಹಿಳೆಯರ ಖಿನ್ನತೆಯ ಮನಸ್ಸು ಪುಳಕಿತವಾಗುತ್ತವೆ: ಹೇಮಾ ಶಾಂತಪ್ಪ ಪೂಜಾರಿ

ಸಾಂಸ್ಕೃತಿಕ ಚಟುವಟಿಕೆಗಳಿಂದ ಮಹಿಳೆಯರ ಖಿನ್ನತೆಯ ಮನಸ್ಸು ಪುಳಕಿತವಾಗುತ್ತವೆ: ಹೇಮಾ ಶಾಂತಪ್ಪ ಪೂಜಾರಿ

ದಾವಣಗೆರೆ: ಕುಟುಂಬದ, ಸಂಸಾರದ ವಿವಿಧ ಸಮಸ್ಯೆಗಳ ಒತ್ತಡದಲ್ಲಿ ಸಹಜವಾಗಿ ಮಹಿಳೆಯರ ಮನಸ್ಸುಗಳು ಖಿನ್ನತೆಗೆ ಒಳಗಾಗುತ್ತದೆ. ಇಂತಹ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಾಂಸ್ಕೃತಿಕ ಚಟುವಟಿಕೆಗಳಿಂದ ಅವರ ಮನಸ್ಸು ಪುಳಕಿತವಾಗುತ್ತದೆ. ಕಳೆದ ಮೂರುವರೆ ದಶಕಗಳಿಂದ ಈ ಸಂಸ್ಥೆ ಯಾವುದೇ ಸರ್ಕಾರದ ಇಲಾಖೆಗಳ ಸಾರ್ವಜನಿಕವಾಗಿ ಪ್ರಾಯೋಜಕತ್ವ, ಅನುದಾನವಿಲ್ಲದೇ ಸ್ವತಂತ್ರವಾಗಿ, ನಿರಂತರವಾಗಿ ಕಠಿಣ ಪರಿಶ್ರಮದಿಂದ ನಡೆದುಕೊಂಡು ಬರುತ್ತಿರುವುದು ಇತರ ಸಂಸ್ಥೆಗಳಿಗೆ ಮಾದರಿ ಎಂದು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ತಮ್ಮ ಅನಿಸಿಕೆ ಹಂಚಿಕೊಂಡರು. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷದಂತೆ “ದಾವಣಗೆರೆ ಗೃಹಿಣಿ ಸ್ಪರ್ಧೆ-2024” ಯಲ್ಲಿ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರ. ನಗರದ ಪ್ರವಾಸಿ ಮಂದಿರ
ರಸ್ತೆಯಲ್ಲಿರುವ ರೋಟರಿ ಬಾಲ ಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ನಡೆದ ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಕಲಾಕುಂಚ ಡಿ.ಸಿ.ಎ. ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ, ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತ ಕಲ್ಲೇಶ್ ಬಹುಮಾನ ವಿಜೇತರಿಗೆ ಶುಭ ಕೋರಿದರು. ದಾವಣಗೆರೆ ಗೃಹಿಣಿ ಸ್ಪಧೆಯಲ್ಲಿ ಭಾಗವಹಿಸಿದ ಸರ್ವರಿಗೂ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ ವಿತರಿಸುವ ಮೂಲಕ ಗೌರವಿಸಲಾಯಿತು. ದಾವಣಗೆರೆ ಗೃಹಿಣಿ ಸ್ಪರ್ಧೆ ಫಲಿತಾಂಶ ಪ್ರಥಮ ಬಹುಮಾನ ಕವಿತಾ ತಿಮ್ಮೇಶ್ ದ್ವಿತೀಯ ಬಹುಮಾನ ಇಂದಿರಾ ಸಿದ್ದೇಶ್ ತೃತಿಯ ಬಹುಮಾನ ವಿಜಯಲಕ್ಷ್ಮಿ ರಮೇಶ್ ಸಾಳಂಕಿ.
ಕುಮಾರಿ ಅಪೇಕ್ಷಾಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕಲಾಕುಂಚ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಲೀಲಾ ಸುಭಾಷ್ ಸ್ವಾಗತಿಸಿದರು. ಶೈಲಾ ವಿನೋದ ದೇವರಜ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ದಾವಣಗೆರೆ ನಗರ ದೇವತೆ ಶ್ರೀ ದುಗ್ಗಮ್ಮ ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡ ಸ್ಥಳದಲ್ಲೇ ಉಚಿತ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೊನೆಯಲ್ಲಿ ಪುಷ್ಪ ಮಂಜುನಾಥ್ ವಂದಿಸಿದರು.

RELATED ARTICLES
- Advertisment -
Google search engine

Most Popular