ಸಿ.ಎ. ಅಂತಿಮ ಪರೀಕ್ಷಾಪೂರ್ವ ತರಬೇತಿಯು ಆತ್ಮವಿಶ್ವಾಸ ಬೆಳೆಸುವ, ಹಾಗೂ ಆಸಕ್ತರಿಗೆ ಮುಕ್ತವಾಗಿರುವ, ವಿಶಿಷ್ಟ ರೀತಿಯ ತರಬೇತಿ ಶಿಬಿರ. “ಸಿ.ಎ. ಪವರ್ 25. ಸಿ.ಎ. ಅಂತಿಮ ಪರೀಕ್ಷಾಪೂರ್ವ ಸೀಸನ್ 1 ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ದಿ. 17-01-2025 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು ಉದ್ಘಾಟನಾ ಮಾತನ್ನು ಹೇಳುತ್ತಾ, ಈ ಶಿಬಿರವು ಸಿ.ಎ. ಅಂತಿಮ ಪರೀಕ್ಷಾ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದ್ದು ಇದರ ಸಂಪೂರ್ಣ ಸದುಪಯೋಗ ಪಡೆದುಕೊಂಡು ಗುರಿ ಸಾಧಿಸಬೇಕು ಎಂದು ಶುಭ ಹಾರೈಸಿದರು.
ತ್ರಿಶಾ ಕ್ಲಾಸಸ್ ಸ್ಥಾಪಕರಾದ ಸಿಎ. ಗೋಪಾಲಕೃಷ್ಣ ಭಟ್ ಇವರು ಪರೀಕ್ಷಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸಲು ಅವಶ್ಯಕವಾಗಿರುವ ಮನೋ ಸಾಮರ್ಥ್ಯಗಳ ವಿವರಣೆ ನೀಡಿ, ಜೀವನದಲ್ಲಿ ಅಳವಡಿಸಬೇಕಾದ ಉತ್ತಮ ಮೌಲ್ಯಗಳ ಬಗ್ಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಸಿ.ಎ. ಪವರ್ -25 ಸಿ.ಎ ಫೈನಲ್ ಗ್ರೂಪ್ಸ್ ಕಾರ್ಯಕ್ರಮದ ಪ್ರಾಯೋಜಕರಾದ ವಿದ್ಯಾಕಲ್ಪಕ ಸಂಸ್ಥೆಯ ಮುಖ್ಯಸ್ಥೆ ಉಷಾ ನಂದಗೋಪಾಲ ಶೆಣೈ, ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯುಶನ್ ನ ಡಾ. ನಾರಾಯಣ್ ಕಾಯರ ಕಟ್ಟೆ, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ ಕೆ. ಮೋಹನ ಪೈ, ಉಪಾಧ್ಯಕ್ಷ ಶ್ರೀ ರಮೇಶ ಡಿ ನಾಯಕ, ಮಂಗಳೂರು ತ್ರಿಶಾ ಕ್ಲಾಸಸ್ ಮುಖ್ಯಸ್ಥೆ ಯಶಸ್ವಿನಿ ಯಶಪಾಲ್, ಉಪನ್ಯಾಸಕರಾದ ಸಿ.ಎ. ಕರಣ್ ಮನ್ಸೂಖಾನಿ ಮುಂಬಯಿ, ಮಂಗಳೂರು ಲೆಕ್ಕ ಪರಿಶೋಧಕ ಸಂಸ್ಥೆಯ ಸದಸ್ಯರಾದ ಸಿಎ ಗೌತಮ ನಾಯಕ್, ಸಿಎ ಪ್ರಸನ್ನಾ ಶೆಣೈ, ಸಿಎ ಜಯಂತ ಶೆಣೈ ನಗರ್, ವಿ.ಕೊ.ಕೇ ಆಡಳಿತ ಅಧಿಕಾರಿ ಡಾ. ಬಿ. ದೇವದಾಸ್ ಪೈ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
51 ದಿನಗಳ ಅವಧಿಯ ಈ ಉಚಿತ ಸನಿವಾಸೀ ತರಬೇತಿಯಲ್ಲಿ ಸಿ.ಎ. ಅಂತಿಮ ಪರೀಕ್ಷಾರ್ಥಿಗಳಿಗೆ ಉತ್ತಮ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ಹಾಗೂ ಅಣಕ ಪರೀಕ್ಷೆ ನೀಡಲಾಗುವುದು. ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ವಿದ್ಯಾಕಲ್ಪಕ ಸಂಸ್ಥೆ, ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ. ವಿದ್ಯಾರ್ಥಿ ಶಾನೆಲ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಣೆ ಮಾಡಿದರು.