Tuesday, May 13, 2025
Homeನಿಧನಯಾದಗಿರಿ: ಮುಸ್ಲಿಂ ಯುವಕನಿಂದ ದಲಿತ ಯುವಕನ ಮರ್ಮಾಂಗಕ್ಕೆ ಒದ್ದು ಹತ್ಯೆ

ಯಾದಗಿರಿ: ಮುಸ್ಲಿಂ ಯುವಕನಿಂದ ದಲಿತ ಯುವಕನ ಮರ್ಮಾಂಗಕ್ಕೆ ಒದ್ದು ಹತ್ಯೆ

ಯಾದಗಿರಿ: ಇಲ್ಲಿನ ಶಗಾಪುರಪೇಟೆ ಬಡಾವಣೆಯಲ್ಲಿ ದಲಿತ ಯುವಕನೊಬ್ಬನನ್ನು ಮುಸ್ಲಿಂ ಯುವಕರ ಗುಂಪು ಹತ್ಯೆ ಮಾಡಿದ ಘಟನೆ ವರದಿಯಾಗಿದೆ. 22ರ ಹರೆಯದ ರಾಕೇಶ್ ಕೊಲೆಯಾದ ಯುವಕ. ಫಯಾಜ್ ಮತ್ತು ನಾಲ್ವರು ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲೆಂದು ರಾಕೇಶ್ ಹೋಗಿದ್ದ. ಇದೇ ವೇಳೆ ರೊಟ್ಟಿ ಕೇಂದ್ರದ ಫಯಾಜ್ ಜೊತೆಗೆ ವಾಕ್ಸಮರ ಆಗಿದೆ. ರಾಕೇಶ್ ಮನೆಗೆ ಮರಳಿದ ಬಳಿಕ ಮತ್ತೆ ಜಗಳವಾಗಿದೆ. ಈ ವೇಳೆ ರಾಕೇಶ್ ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆ ಕೊಲೆಯಾದ ಕುಟುಂಬ ಮತ್ತು ಆರೋಪಿಗಳ ನಡುವೆ ಸಂದಾನ ಮಾತುಕತೆ ನಡೆದಿದೆ. ಆದರೆ ಬಿಜೆಪಿ ಮಧ್ಯಪ್ರವೇಶದಿಂದ ಕೊಲೆಯಾದ ರಾಕೇಶ್ ತಾಯಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಯಾದಗಿರಿ ಎಸ್ಪಿ ಸಂಗೀತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular