ಮೂಡುಬಿದಿರೆ: ಜುಲೈ 11 ಪಾಲಡ್ಕ ಬಿಲ್ಲವ ಸಂಘದ ವ್ಯಾಪ್ತಿಯಲ್ಲಿ 5 ಸೆನ್ಸ್ ಮನೆಯಲ್ಲಿ ವಾಸವಾಗಿರುವ ಸಂಪಾ ಪೂಜಾರಿ ಮತ್ತು ಅವರ ಅಕ್ಕ ಅನಾರೋಗ್ಯ, ಪೀಡಿತ ದೇವಕಿ ಪೂಜಾರಿ ಇವರು ದುಡಿಯಲು ಅಶಕ್ತರಾಗಿದ್ದು, ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇದನ್ನು ಅರಿತ ಸ್ಥಳೀಯರಾದ, ಪತ್ರಕರ್ತ ಜಗದೀಶ್ ಸಾಲ್ಯಾನ್ ಇವರು ಮೂಡುಬಿದಿರೆ ಯುವವಾಹಿನಿ ಘಟಕದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
ಜುಲೈ 10ರಂದು ಘಟಕದ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್, ಸದಸ್ಯರಾದ ಉಮೇಶ್ ಕೋಟ್ಯಾನ್, ಮತ್ತು ಜಗದೀಶ್ ಸಾಲ್ಯಾನ್ ಇವರೆಲ್ಲ ಹೋಗಿ ಪರಿಶೀಲಿಸಿದಾಗ ಹಸಿವಿಗೆ ಏನು ಸಿಗದೆ ಸೊರಗಿ ಹೋಗಿದ್ದ ಅನಾರೋಗ್ಯ ಪೀಡಿತ ದೇವಕಿ ಪೂಜಾರ್ತಿ , ಮತ್ತೊಂದು ಕಡೆ ದುಡಿಯಲು ಆಗದೆ ಮಾನಸಿಕವಾಗಿ ಕುಗ್ಗಿದ ಸಂಪಾ ಪೂಜಾರಿ, ಮನೆಯಲ್ಲಿ ಬಟ್ಟೆ ಬರೆ ಒಗೆಯದೆ ಇಟ್ಟ ರಾಶಿ, ಮನೆ ಸುತ್ತ ಶುಚಿತ್ವವಿಲ್ಲದ ಸ್ಥಿತಿ ಗೋಚರಿಸಿತು.ಸದಸ್ಯರಾದ ಉಮೇಶ್ ಕೋಟ್ಯಾನ್ ಇವರ ಆರ್ಥಿಕ ನೆರವಿನೊಂದಿಗೆ ಅವರಿಗೆ ಎರಡು ತಿಂಗಳಿಗೆ ಬೇಕಾಗುವಷ್ಟು ರೇಷನ್ ಸಾಮಗ್ರಿಗಳನ್ನು ಗುರುವಾರ ಯುವವಾಹಿನಿಯ ಮೂಲಕ ನೀಡಿದರು.