Monday, May 12, 2025
Homeಬೆಂಗಳೂರುರಾತ್ರಿ ಫೇಸ್ಬುಕ್‌ ಲೈವ್‌ನಲ್ಲಿ ಮಾತನಾಡಿದ್ದ ಯೂಟ್ಯೂಬರ್‌ ಬೆಳಿಗ್ಗೆ ಶವವಾಗಿ ಪತ್ತೆ | ಅನುಮಾನಾಸ್ಪದ ಸಾವು

ರಾತ್ರಿ ಫೇಸ್ಬುಕ್‌ ಲೈವ್‌ನಲ್ಲಿ ಮಾತನಾಡಿದ್ದ ಯೂಟ್ಯೂಬರ್‌ ಬೆಳಿಗ್ಗೆ ಶವವಾಗಿ ಪತ್ತೆ | ಅನುಮಾನಾಸ್ಪದ ಸಾವು

ಬೆಂಗಳೂರು: ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದ ವ್ಯಕ್ತಿಯೊಬ್ಬರ ಶವ ನೀಲಗಿರಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನ ಉಂಟು ಮಾಡಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಅರಣ್ಯದಲ್ಲಿ ಮಂಜುನಾಥ್‌ ಎಂಬವರ ಶವ ಪತ್ತೆಯಾಗಿದೆ.
ಟಿ. ದಾಸರಹಳ್ಳಿಯ ಮಂಜುನಾಥ ನಗರದ ನಿವಾಸಿ ಮಂಜುನಾಥ ಎನ್ನುವವರು ಯೂಟ್ಯೂಬ್‌ ಚಾನೆಲ್‌ ಒಂದನ್ನು ನಡೆಸುತ್ತಿದ್ದರು. ರಾತ್ರಿ ತನ್ನ ಫೇಸ್ಬುಕ್‌ ಲೈವ್‌ನಲ್ಲಿ ಬಂದು ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಇಂದು ಅವರ ಶವ ನೀಲಗಿರಿ ಮರದಲ್ಲಿ ಪತ್ತೆಯಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಮಂಜುನಾಥ್‌ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಸೋಲದೇವನಹಳ್ಳಿ ಅರಣ್ಯಕ್ಕೆ ಸ್ಕೂಟರ್‌ ತೆಗೆದುಕೊಂಡು ಹೋಗಿ ಅಲ್ಲೇ ನಿಲ್ಲಿಸಲಾಗಿದ್ದು, ಹೀಗಾಗಿ ಇದು ಆತ್ಮಹತ್ಯೆ ಇರಬಹುದೆಂದೂ ಹೇಳಲಾಗುತ್ತಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES
- Advertisment -
Google search engine

Most Popular