23ಲಕ್ಷ ವಿದ್ಯರ್ಥಿಗಳಿಗೆ ಓeeಣ ಪರೀಕ್ಷೆಗೆ ತೊಂದರೆಯಾಗಿದ್ದು, ಇದೊಂದು ಪ್ರಶ್ನೆ ಪತ್ರಿಕೆಯ ಸೋರಿಕೆ ದೊಡ್ಡ ಮಾಫಿಯಾದಂತಿದ್ದು, ಈ ಹಿಂದೆಯೂ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ರಾಜ್ಯ ರ್ಕಾರ ನೀಟ್ ಪರೀಕ್ಷೆಯಿಂದ ಹೊರಬಂದು ರಾಜ್ಯದ ವಿದ್ಯರ್ಥಿಗಳಿಗೆ ಸಿಇಟಿ ಪರೀಕ್ಷೆಗಳ ಮೂಲಕ ಈ ಹಿಂದೆ ಇದ್ದ ಕ್ರಮದಂತೆ ಮೆಡಿಕಲ್ ಸೀಟುಗಳನ್ನು ವಿದ್ಯರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ನೀಡಬೇಕೆಂದು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ನಿರ್ಣಯವನ್ನು ರ್ವಾನುಮತದಿಂದ ಅಂಗೀಕರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
ಸುಪ್ರೀಂ ಕರ್ಟ್ ಆದೇಶದಂತೆ ನೀಟ್ ಪರೀಕ್ಷೆ ಮಾಡಲೇಬೇಕೆಂಬ ಆದೇಶವಿದ್ದರೂ, ದೇಶಾದಾದ್ಯಂತ ವಿದ್ಯರ್ಥಿಗಳಿಗೆ ಮೋಸ ಮತ್ತು ಮಾಫಿಯದ ಇದೊಂದು ವ್ಯಾಪಾರೀಕರಣ ವಾಗಿದ್ದು, ದೇಶದಲ್ಲಿ 26 ಲಕ್ಷ ವಿದ್ಯರ್ಥಿಗಳಿಗೆ ಉಂಟಾದ ಅನ್ಯಾಯದ ಬಗ್ಗೆ ಸರಿಯಾದ ಕಾನೂನು ಕ್ರಮವನ್ನು ಕೇಂದ್ರ ರ್ಕಾರ ಕೂಡಲೇ ಪ್ರವೇಶ ಮಾಡಿ ಅಯಾ ರಾಜ್ಯಕ್ಕೆ ಬಿಟ್ಟುಕೊಟ್ಟು ನ್ಯಾಯ ಒದಗಿಸಿಕೊಡಬೇಕೆಂದು ಕೇಂದ್ರ ರ್ಕಾರವನ್ನು ಐವನ್ ಡಿʼಸೋಜಾ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 2 ಬಾರಿ ನೀಟ್ ಬಗ್ಗೆ ಸದನದಲ್ಲಿ ಗಮನ ಸೆಳೆಯುವ ಪ್ರಶ್ನೆಮೂಲಕ ರಾಜ್ಯ ರ್ಕಾರದ ಗಮನ ಸೆಳೆದಿದ್ದು, ನೀಟ್ ಒಂದು ಅಘಾತಕಾರಿ ಮಾಫಿಯಾವಾಗಿದ್ದು, ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಜೊತೆಗೆ ಗ್ರಾಮಾಂತರ ವಿದ್ಯರ್ಥಿಗಳಿಗೆ ನೀಟ್ ತರಭೇತಿ ಇಲ್ಲದೆ ಗ್ರಾಮಾಂತರ ವೈದ್ಯ ವಿದ್ಯರ್ಥಿಗಳಿಗೆ ಕನಸಿಗೆ ಹಿನ್ನೆಡೆಯಾಗಿದ್ದು, ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಈ ಮಾಫಿಯಾದ ಮೂಲಕ ಮೆರಿಟ್ ವಿದ್ಯರ್ಥಿಗಳಿಗೆ ಅನ್ಯಾಯವಾಗಿದೆ.
ಅದ್ದರಿಂದ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಮತ್ತು ಡಾ|ಶರಣ ಪ್ರಕಾಶ್ ಪಾಟೀಲರವರನ್ನು ಮತ್ತು ಮುಖ್ಯಮಂತ್ರಿಗಳನ್ನು ಇವರುಗಳು ಕೂಡಲೇ ಕೇಂದ್ರವನ್ನು ಸಂಪರ್ಕಿಸಿ ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರ್ಕಾರದ ಮೂಲಕ ಕೇಂದ್ರ ರ್ಕಾರವನ್ನು ಐವನ್ ಡಿʼಸೋಜಾ ಒತ್ತಾಯಿಸಿದ್ದಾರೆ.
