ರಾಷ್ಟ್ರೀಯ
ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ನುಗ್ಗಿದ ಬಸ್; 2 ವರ್ಷದ ಮಗು ಮೃತ ನಾಲ್ವರಿಗೆ ಗಾಯ
ಹಾವೇರಿ : ನಗರದ ಎನ್ಡಬ್ಲ್ಯು ಕೆಆರ್ಟಿಸಿ ಬಸ್ ನಿಲ್ದಾಣದಲ್ಲಿ ಘೋರ ಅಪಘಾತ ನಡೆದಿದೆ. ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಪ್ಲಾಟ್ಫಾರ್ಮ್ ಮೇಲೆ ನಿಂತಿದ್ದವರ ಮೇಲೆ ಬಸ್ ನುಗ್ಗಿದ ಪರಿಣಾಮವಾಗಿ...
ಮಂಗಳೂರು
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿಗೆ ದ್ವೀತಿಯ ಸ್ಥಾನ
ಮಂಗಳೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಬುಧವಾರ (ಏಪ್ರಿಲ್ 23) ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ...
ಮಂಗಳೂರಿನ ಹೋಟೆಲ್ಗೂ ಬಂತು ರೋಬೋ ವೈಟರ್..!
ಮಂಗಳೂರು: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ ಬದಲಾವಣೆಗಳ ಅನುಷ್ಠಾನ ಶೀಘ್ರಗತಿಯಲ್ಲಿ ಆಗುತ್ತಿದೆ. ಅದರಂತೆ ಕರಾವಳಿ ಕರ್ನಾಟಕದಲ್ಲೇ ಮೊದಲು ಎಂಬಂತೆ ಮಂಗಳೂರಿನ ಹೊಟೇಲೊಂದರಲ್ಲಿ ರೋಬೋ ವೈಟರ್ ಕಾರ್ಯಾಚರಿಸುತ್ತಿದೆ. ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ ‘ಪಾಕಶಾಲ’ ಹೆಸರಿನ...
ರಾಜ್ಯ
ರಾಜಕೀಯ
ಲೋಕಸಭೆಯಲ್ಲಿ ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ, ದಕ್ಷಿಣ ಕನ್ನಡದ ಅಭಿವೃದ್ಧಿ ಪರ ಧ್ವನಿಯೆತ್ತಿದ ಸಂಸದ ಕ್ಯಾ. ಬ್ರಿಜೇಶ್ ಚೌಟ
ಹಣಕಾಸು ಮಸೂದೆ ಮೇಲಿನ ಚರ್ಚೆನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಹಣಕಾಸು ಶಿಸ್ತು, ತೆರಿಗೆ ಸುಧಾರಣೆ, ರಾಷ್ಟ್ರೀಯ...
ಶಿಕ್ಷಣ
Latest Reviews
ಕ್ಲಿಯರ್ ಟ್ರಿಪ್ನಲ್ಲಿ ಇನ್ಮುಂದೆ ರೈಲು ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯ : ಐಆರ್ಸಿಟಿಸಿ ಕೈ ಜೋಡಿಸಿದ ಫ್ಲಿಪ್ ಕಾರ್ಟ್ ಅಂಗಸಂಸ್ಥೆ
ಈ ಸೌಲಭ್ಯ ಬಿಡುಗಡೆ ಮಾಡುವ ಮೂಲಕ ಫ್ಲಿಪ್ ಕಾರ್ಟ್ ಸಮೂಹದ ಈ ಸಂಸ್ಥೆಯು ವಿಮಾನ, ಹೋಟೆಲ್, ರೈಲು, ಬಸ್ ಮತ್ತು ಹಾಲಿಡೇ ಪ್ಯಾಕೇಜ್ ಗಳನ್ನು ಒಳಗೊಂಡಂತೆ ಹಲವು ಸೇವೆಗಳನ್ನು ಒಂದೇ ವೇದಿಯಲ್ಲಿ ಒದಗಿಸುತ್ತಿದೆ.ರಾಷ್ಟ್ರೀಯ: ಫ್ಲಿಪ್ ಕಾರ್ಟ್ ಒಡೆತನದ ಭಾರತದ ಪ್ರಮುಖ ಆನ್ ಲೈನ್ ಟ್ರಾವೆಲ್ ಸಂಸ್ಥೆಯಾದ ಕ್ಲಿಯರ್ ಟ್ರಿಪ್ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಭಾರತೀಯ ರೈಲ್ವೆಯ ಅಧಿಕೃತ ಟಿಕೆಟಿಂಗ್ ವಿಭಾಗವಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಸಂಸ್ಥೆಯು, ತನ್ನ ಪ್ಲಾಟ್ ಫಾರ್ಮ್ ನಲ್ಲಿ ಇಂದಿನಿಂದ ರೈಲು ಟಿಕೆಟ್ ಬುಕಿಂಗ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.ಈ ಹೊಸ ಸೌಲಭ್ಯ ಸೇರ್ಪಡೆಯೊಂದಿಗೆ, ಫ್ಲಿಪ್ ಕಾರ್ಟ್ ಸಮೂಹದ ಈ ಸಂಸ್ಥೆಯು ಈಗ ವಿಮಾನ, ಹೋಟೆಲ್, ಬಸ್ ಹಾಗೂ ರೈಲು ಪ್ರಯಾಣ ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳನ್ನು ಒಂದೇ ಸೂರಿನಡಿ ನೀಡುವ 'ಮಲ್ಟಿ- ಮಾಡೆಲ್' ಸಂಸ್ಥೆಯಾಗಿ ಹೊರಹೊಮ್ಮಿದೆ.ಈ ಪಾಲುದಾರಿಕೆಯು ಗ್ರಾಹಕರಿಗೆ ದೊಡ್ಡ ಮಟ್ಟದ ವಿಶ್ವಾಸಾರ್ಹತೆ ಮತ್ತು ಸರಳವಾದ ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ. ಕ್ಲಿಯರ್ ಟ್ರಿಪ್ ಬಳಕೆದಾರರಿಗೆ ಆಪ್ ಮೂಲಕವೇ ರೈಲು ಪ್ರಯಾಣ ಆಯ್ಕೆಯನ್ನು ಹುಡುಕಲು, ಬುಕ್ ಮಾಡಲು ಮತ್ತು ನಿರ್ವಹಿಸಲು ಸುಲಭವಾಗಿ ಅವಕಾಶ ಮಾಡಿಕೊಡಲಿದೆ. ಇದು ಏಕೀಕೃತ, ಮಲ್ಟಿ-ಮಾಡೆಲ್ (ಬಹು-ಮಾದರಿಯ) ಪ್ರಯಾಣ ವೇದಿಕೆಯಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.ಈ ಸೇವೆಯ ಮೂಲಕ, ಪ್ರಯಾಣಿಕರು ಭಾರತದಾದ್ಯಂತ ರೈಲು ಮಾರ್ಗಗಳ ಟಿಕೆಟ್ ಬುಕಿಂಗ್ ಮಾಡಬಹುದು. ಇದರಲ್ಲಿ ರೈಲ್ವೆ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ಜನರಲ್ ಮತ್ತು ತತ್ಕಾಲ್ ಕೋಟಾಗಳು ಲಭ್ಯವಿರುತ್ತವೆ. ಇದರೊಂದಿಗೆ ನೈಜ-ಸಮಯದ ಸೀಟು ಲಭ್ಯತೆ, ದರದ ಮಾಹಿತಿ, ಪಿಎನ್ಆರ್ ಸ್ಟೇಟಸ್ ಟ್ರ್ಯಾಕಿಂಗ್, ಬರ್ತ್ ಆಯ್ಕೆ ಮತ್ತು ಸುರಕ್ಷಿತ ಡಿಜಿಟಲ್ ಪಾವತಿಗಳಂತಹ ಅಗತ್ಯ ಸೇವೆಗಳನ್ನು ಒಂದೇ ಸರಳ ಇಂಟರ್ ಫೇಸ್ ನಲ್ಲಿ ಪಡೆಯಬಹುದು.ಈ ಕುರಿತು ಕ್ಲಿಯರ್ ಟ್ರಿಪ್ ನ ಚೀಫ್ ಗ್ರೋತ್ ಅಂಡ್ ಬಿಸಿನೆಸ್ ಆಫೀಸರ್ ಮಂಜರಿ ಸಿಂಘಾಲ್ ಮಾತನಾಡಿ, "ರೈಲು ಪ್ರಯಾಣವು ಭಾರತದ ಸಾರಿಗೆ ವ್ಯವಸ್ಥೆಯ ನಿರ್ಣಾಯಕ ಭಾಗವಾಗಿದೆ. ನಾವು ಏಕೀಕೃತ, ಮಲ್ಟಿ-ಮಾಡೆಲ್ ಟ್ರಾವೆಲ್ ಪ್ಲಾಟ್ ಫಾರ್ಮ್ ಆಗುವ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಈ ಹೊಸ ಸೌಲಭ್ಯ ಪರಿಚಯವು ಒಂದು ಪ್ರಮುಖ ಹೆಜ್ಜೆಯಾಗಿದೆ. ಐಆರ್ಸಿಟಿಸಿ ಜೊತೆಗಿನ ನಮ್ಮ ಪಾಲುದಾರಿಕೆ ಮೂಲಕ ಬುಕಿಂಗ್ ಅನುಭವವನ್ನು ಸರಳಗೊಳಿಸುವ ಮತ್ತು ಲಕ್ಷಾಂತರ ಪ್ರಯಾಣಿಕರಿಗೆ ಇದನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವತ್ತ ನಾವು ಗಮನ ಹರಿಸಿದ್ದೇವೆ," ಎಂದು ತಿಳಿಸಿದರು.ಕ್ಲಿಯರ್ ಟ್ರಿಪ್ ನ ಚೀಫ್ ಬಿಸಿನೆಸ್ ಆಫೀಸರ್ (ಏರ್) ಗೌರವ್ ಪಟ್ವಾರಿ ಮಾತನಾಡಿ,"ಪ್ರತಿ ವರ್ಷ 80 ಕೋಟಿಗೂ ಹೆಚ್ಚು ರಿಸರ್ವ್ ಮಾಡಿದ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದು ಕೇವಲ ಸಂಖ್ಯೆಗೆ ಸೀಮಿತವಾದ ವಿಚಾರವಲ್ಲ; ಇದು ಗ್ರಾಹಕರಿಗೆ ವಿಭಿನ್ನವಾದ ಅನುಭವವನ್ನು ಒದಗಿಸುವುದಾಗಿದೆ. ಸರಳ, ಸುಲಭ ಬುಕಿಂಗ್ ಅನುಭವ, ಪ್ರಿಡಿಕ್ಟಿವ್ ಇಂಟೆಲಿಜೆನ್ಸ್ ಮತ್ತು ವೈಯಕ್ತಿಕೀಕರಣ ಸೌಲಭ್ಯವನ್ನು ಅಳವಡಿಸುವ ಮೂಲಕ, ಶೋಧನೆಯಿಂದ ಹಿಡಿದು ಬುಕಿಂಗ್ ನಂತರದ ಬೆಂಬಲದವರೆಗೆ ಪ್ರತಿಯೊಂದು ಹಂತವೂ ವೇಗವಾಗಿರುವಂತೆ, ವಿಶ್ವಾಸಾರ್ಹವಾಗಿರುವಂತೆ ಮತ್ತು ಒತ್ತಡರಹಿತವಾಗಿರುವಂತೆ ನಾವು ನೋಡಿಕೊಳ್ಳಲಿದ್ದೇವೆ" ಎಂದರು.ಭಾರತದ ರೈಲ್ವೆ ಜಾಲವು ವಿಶ್ವದ ಅತ್ಯಂತ ಸಂಕೀರ್ಣ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಪ್ರತಿದಿನ 2.3 ಕೋಟಿ ಮತ್ತು ವಾರ್ಷಿಕವಾಗಿ 700 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ಕ್ಲಿಯರ್ ಟ್ರಿಪ್ ತನ್ನ ಸೇವೆಗಳಲ್ಲಿ ರೈಲು ಬುಕಿಂಗ್ ಅನ್ನು ಸಂಯೋಜಿಸುವ ಮೂಲಕ ಈ ಬೃಹತ್ ಬೇಡಿಕೆಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಕಂಪನಿಯು ಶೀಘ್ರದಲ್ಲೇ ಈ ಸೇವೆಯನ್ನು ತನ್ನ ವೆಬ್ ಪ್ಲಾಟ್ ಫಾರ್ಮ್ ಗೂ ವಿಸ್ತರಿಸಲು ಯೋಜಿಸಿದ್ದು, ಬಳಕೆದಾರರಿಗೆ ಎಲ್ಲಾ ವೇದಿಕೆಗಳಲ್ಲಿ ಸುಗಮ ಅನುಭವವನ್ನು ಒದಗಿಸಲಿದೆ.
ಧಾರ್ಮಿಕ
ಬಪ್ಪನಾಡು : ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ವಿಜ್ಞಾಪನಾ ಪತ್ರ ಬಿಡುಗಡೆ
ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಮತ್ತು ಕ್ಷೇತ್ರಪಾಲ ಗುಡಿಯ ನವೀಕರಣ ಹಾಗೂ ದೇವಳದ ವಿವಿಧ ಕಾಮಗಾರಿಗಳ ಬಗ್ಗೆ ವಿಜ್ಞಾಪನ ಪತ್ರ...
ಮಾ.27: ಬದ್ಯಾರು-ಶಿರ್ಲಾಲು ಲೋಕನಾಥೇಶ್ವರ ದೇವಸ್ಥಾನದಲ್ಲಿ 24ನೇ ವರ್ಷದ “ಪುರುಷ ಕಟ್ಟುವ ಕಾರ್ಯಕ್ರಮ”
ಶ್ರೀ ಲೋಕನಾಥೇಶ್ವರ ದೇವಸ್ಥಾನ, ಬದ್ಯಾರು-ಶಿರ್ಲಾಲು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಬದ್ಯಾರು-ಶಿರ್ಲಾಲು ಹಾಗೂ ಶ್ರೀದೇವಿ ಮಹಿಳಾ ಕೇಂದ್ರ, ಬದ್ಯಾರು-ಶಿರ್ಲಾಲು ಇದರ ಸಂಯುಕ್ತ ಆಶ್ರಯದಲ್ಲಿ ಇದೇ ಬರುವ ತಾ : 27-03-2026ನೇ ಶುಕ್ರವಾರದಿಂದ ತಾ:...
ನಿನ್ನಿಕಲ್ಲು ಪಾದೆ – ಕಾಲ ನಿರ್ಣಯದ ಶ್ರೀಚಕ್ರ ಸಾನ್ನಿಧ್ಯ
ಜಾಗತಿಕ ಪ್ರಾಕೃತಿಕ ಪಾರಂಪರಿಕ ಅಧ್ಯಯನ, ಧ್ಯಾನ ಹಾಗೂ ಆರಾಧನಾ ಕೇಂದ್ರ ಸ್ಥಾಪನೆಗೆ ಒಪ್ಪಿಗೆನಂದಿಕೂರು:ತುಳುನಾಡಿನ ಅಪೂರ್ವ ಪವಿತ್ರ ಸಾನ್ನಿಧ್ಯವಾಗಿರುವ ನಿನ್ನಿಕಲ್ಲು ಪಾದೆಯ ಐತಿಹಾಸಿಕ ಹಿನ್ನೆಲೆಯ ಕುರಿತು ನಡೆದ ತಾಂಬೂಲ ಪ್ರಶ್ನೆಯಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ...
ನ.26ರಂದು ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ
ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸುತ್ತಿರುವ ದಿನಾಂಕ 26-11-2025ನೇ ಬುಧವಾರ ಎಡಪದವು ಶ್ರೀ ರಾಧಾಕೃಷ್ಣ ಪಂತ್ರಿಯವರ ನೇತೃತ್ವದಲ್ಲಿ ಜರುಗಲಿದೆ.ದಿನಾಂಕ 25-11-2025ನೇ ಮಂಗಳವಾರ...
ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ವಿಜ್ಞಾಪನ ಪತ್ರ ಬಿಡುಗಡೆ
ಕೈಕಂಬ: ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಎರಡು ದೇವರ ಹೆಸರಿನಿಂದ ಕೂಡಿದೆಯಾದರೂ ದೇವರು ಒಂದೇ ಈಶ್ವರ ಮತ್ತು ಪಾರ್ವತಿ ಇರುವುದು ಇಲ್ಲಿನ ವಿಶೇಷತೆ. ಬ್ರಹ್ಮಕಲಶೋತ್ಸವ ಎನ್ನುವುದು ನಮ್ಮ ಸೌಭಾಗ್ಯ. ಶೆಡ್ಯೆ...
Trending
ಈ ಸೌಲಭ್ಯ ಬಿಡುಗಡೆ ಮಾಡುವ ಮೂಲಕ ಫ್ಲಿಪ್ ಕಾರ್ಟ್ ಸಮೂಹದ ಈ ಸಂಸ್ಥೆಯು ವಿಮಾನ, ಹೋಟೆಲ್, ರೈಲು, ಬಸ್ ಮತ್ತು ಹಾಲಿಡೇ ಪ್ಯಾಕೇಜ್ ಗಳನ್ನು ಒಳಗೊಂಡಂತೆ ಹಲವು ಸೇವೆಗಳನ್ನು ಒಂದೇ ವೇದಿಯಲ್ಲಿ ಒದಗಿಸುತ್ತಿದೆ.ರಾಷ್ಟ್ರೀಯ: ಫ್ಲಿಪ್ ಕಾರ್ಟ್ ಒಡೆತನದ ಭಾರತದ ಪ್ರಮುಖ ಆನ್ ಲೈನ್ ಟ್ರಾವೆಲ್ ಸಂಸ್ಥೆಯಾದ ಕ್ಲಿಯರ್ ಟ್ರಿಪ್ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಭಾರತೀಯ ರೈಲ್ವೆಯ ಅಧಿಕೃತ ಟಿಕೆಟಿಂಗ್ ವಿಭಾಗವಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಸಂಸ್ಥೆಯು, ತನ್ನ ಪ್ಲಾಟ್ ಫಾರ್ಮ್ ನಲ್ಲಿ ಇಂದಿನಿಂದ ರೈಲು ಟಿಕೆಟ್ ಬುಕಿಂಗ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.ಈ ಹೊಸ ಸೌಲಭ್ಯ ಸೇರ್ಪಡೆಯೊಂದಿಗೆ, ಫ್ಲಿಪ್ ಕಾರ್ಟ್ ಸಮೂಹದ ಈ ಸಂಸ್ಥೆಯು ಈಗ ವಿಮಾನ, ಹೋಟೆಲ್, ಬಸ್ ಹಾಗೂ ರೈಲು ಪ್ರಯಾಣ ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳನ್ನು ಒಂದೇ ಸೂರಿನಡಿ ನೀಡುವ 'ಮಲ್ಟಿ- ಮಾಡೆಲ್' ಸಂಸ್ಥೆಯಾಗಿ ಹೊರಹೊಮ್ಮಿದೆ.ಈ ಪಾಲುದಾರಿಕೆಯು ಗ್ರಾಹಕರಿಗೆ ದೊಡ್ಡ ಮಟ್ಟದ ವಿಶ್ವಾಸಾರ್ಹತೆ ಮತ್ತು ಸರಳವಾದ ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ. ಕ್ಲಿಯರ್ ಟ್ರಿಪ್ ಬಳಕೆದಾರರಿಗೆ ಆಪ್ ಮೂಲಕವೇ ರೈಲು ಪ್ರಯಾಣ ಆಯ್ಕೆಯನ್ನು ಹುಡುಕಲು, ಬುಕ್ ಮಾಡಲು ಮತ್ತು ನಿರ್ವಹಿಸಲು ಸುಲಭವಾಗಿ ಅವಕಾಶ ಮಾಡಿಕೊಡಲಿದೆ. ಇದು ಏಕೀಕೃತ, ಮಲ್ಟಿ-ಮಾಡೆಲ್ (ಬಹು-ಮಾದರಿಯ) ಪ್ರಯಾಣ ವೇದಿಕೆಯಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.ಈ ಸೇವೆಯ ಮೂಲಕ, ಪ್ರಯಾಣಿಕರು ಭಾರತದಾದ್ಯಂತ ರೈಲು ಮಾರ್ಗಗಳ ಟಿಕೆಟ್ ಬುಕಿಂಗ್ ಮಾಡಬಹುದು. ಇದರಲ್ಲಿ ರೈಲ್ವೆ ಸಚಿವಾಲಯದ ಮಾರ್ಗಸೂಚಿಗಳ ಅನ್ವಯ ಜನರಲ್ ಮತ್ತು ತತ್ಕಾಲ್ ಕೋಟಾಗಳು ಲಭ್ಯವಿರುತ್ತವೆ. ಇದರೊಂದಿಗೆ ನೈಜ-ಸಮಯದ ಸೀಟು ಲಭ್ಯತೆ, ದರದ ಮಾಹಿತಿ, ಪಿಎನ್ಆರ್ ಸ್ಟೇಟಸ್ ಟ್ರ್ಯಾಕಿಂಗ್, ಬರ್ತ್ ಆಯ್ಕೆ ಮತ್ತು ಸುರಕ್ಷಿತ ಡಿಜಿಟಲ್ ಪಾವತಿಗಳಂತಹ ಅಗತ್ಯ ಸೇವೆಗಳನ್ನು ಒಂದೇ ಸರಳ ಇಂಟರ್ ಫೇಸ್ ನಲ್ಲಿ ಪಡೆಯಬಹುದು.ಈ ಕುರಿತು ಕ್ಲಿಯರ್ ಟ್ರಿಪ್ ನ ಚೀಫ್ ಗ್ರೋತ್ ಅಂಡ್ ಬಿಸಿನೆಸ್ ಆಫೀಸರ್ ಮಂಜರಿ ಸಿಂಘಾಲ್ ಮಾತನಾಡಿ, "ರೈಲು ಪ್ರಯಾಣವು ಭಾರತದ ಸಾರಿಗೆ ವ್ಯವಸ್ಥೆಯ ನಿರ್ಣಾಯಕ ಭಾಗವಾಗಿದೆ. ನಾವು ಏಕೀಕೃತ, ಮಲ್ಟಿ-ಮಾಡೆಲ್ ಟ್ರಾವೆಲ್ ಪ್ಲಾಟ್ ಫಾರ್ಮ್ ಆಗುವ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಈ ಹೊಸ ಸೌಲಭ್ಯ ಪರಿಚಯವು ಒಂದು ಪ್ರಮುಖ ಹೆಜ್ಜೆಯಾಗಿದೆ. ಐಆರ್ಸಿಟಿಸಿ ಜೊತೆಗಿನ ನಮ್ಮ ಪಾಲುದಾರಿಕೆ ಮೂಲಕ ಬುಕಿಂಗ್ ಅನುಭವವನ್ನು ಸರಳಗೊಳಿಸುವ ಮತ್ತು ಲಕ್ಷಾಂತರ ಪ್ರಯಾಣಿಕರಿಗೆ ಇದನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವತ್ತ ನಾವು ಗಮನ ಹರಿಸಿದ್ದೇವೆ," ಎಂದು ತಿಳಿಸಿದರು.ಕ್ಲಿಯರ್ ಟ್ರಿಪ್ ನ ಚೀಫ್ ಬಿಸಿನೆಸ್ ಆಫೀಸರ್ (ಏರ್) ಗೌರವ್ ಪಟ್ವಾರಿ ಮಾತನಾಡಿ,"ಪ್ರತಿ ವರ್ಷ 80 ಕೋಟಿಗೂ ಹೆಚ್ಚು ರಿಸರ್ವ್ ಮಾಡಿದ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದು ಕೇವಲ ಸಂಖ್ಯೆಗೆ ಸೀಮಿತವಾದ ವಿಚಾರವಲ್ಲ; ಇದು ಗ್ರಾಹಕರಿಗೆ ವಿಭಿನ್ನವಾದ ಅನುಭವವನ್ನು ಒದಗಿಸುವುದಾಗಿದೆ. ಸರಳ, ಸುಲಭ ಬುಕಿಂಗ್ ಅನುಭವ, ಪ್ರಿಡಿಕ್ಟಿವ್ ಇಂಟೆಲಿಜೆನ್ಸ್ ಮತ್ತು ವೈಯಕ್ತಿಕೀಕರಣ ಸೌಲಭ್ಯವನ್ನು ಅಳವಡಿಸುವ ಮೂಲಕ, ಶೋಧನೆಯಿಂದ ಹಿಡಿದು ಬುಕಿಂಗ್ ನಂತರದ ಬೆಂಬಲದವರೆಗೆ ಪ್ರತಿಯೊಂದು ಹಂತವೂ ವೇಗವಾಗಿರುವಂತೆ, ವಿಶ್ವಾಸಾರ್ಹವಾಗಿರುವಂತೆ ಮತ್ತು ಒತ್ತಡರಹಿತವಾಗಿರುವಂತೆ ನಾವು ನೋಡಿಕೊಳ್ಳಲಿದ್ದೇವೆ" ಎಂದರು.ಭಾರತದ ರೈಲ್ವೆ ಜಾಲವು ವಿಶ್ವದ ಅತ್ಯಂತ ಸಂಕೀರ್ಣ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಪ್ರತಿದಿನ 2.3 ಕೋಟಿ ಮತ್ತು ವಾರ್ಷಿಕವಾಗಿ 700 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ಕ್ಲಿಯರ್ ಟ್ರಿಪ್ ತನ್ನ ಸೇವೆಗಳಲ್ಲಿ ರೈಲು ಬುಕಿಂಗ್ ಅನ್ನು ಸಂಯೋಜಿಸುವ ಮೂಲಕ ಈ ಬೃಹತ್ ಬೇಡಿಕೆಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಕಂಪನಿಯು ಶೀಘ್ರದಲ್ಲೇ ಈ ಸೇವೆಯನ್ನು ತನ್ನ ವೆಬ್ ಪ್ಲಾಟ್ ಫಾರ್ಮ್ ಗೂ ವಿಸ್ತರಿಸಲು ಯೋಜಿಸಿದ್ದು, ಬಳಕೆದಾರರಿಗೆ ಎಲ್ಲಾ ವೇದಿಕೆಗಳಲ್ಲಿ ಸುಗಮ ಅನುಭವವನ್ನು ಒದಗಿಸಲಿದೆ.


Recent Comments