ದೇವಲೋಕದ ನಾದ ವೈಭವಕ್ಕೆ ಸಾಕ್ಷಿಯಾಗಲಿದೆ ಗುಂಡ್ಯಡ್ಕ : ಇಂದು ‘ವಿಷ್ಣು ಸಹಸ್ರ ನಾಮ’ ಯಕ್ಷಗಾನ ತಾಳಮದ್ದಳೆ

0
46

​ವರದಿ : ಮಂದಾರ ರಾಜೇಶ್ ಭಟ್

ಮೂಡುಬಿದಿರೆ : ಕಲೆ ಮತ್ತು ಭಕ್ತಿ ಒಂದಾದಾಗ ಅಲ್ಲಿ ಆಧ್ಯಾತ್ಮದ ನೆಲೆ ಸೃಷ್ಟಿಯಾಗುತ್ತದೆ. ಯಕ್ಷಗಾನದ ತವರೂರಾದ ಕರಾವಳಿಯ ಮಣ್ಣಿನಲ್ಲಿ ತಾಳಮದ್ದಳೆ ಎಂದರೆ ಕೇವಲ ಕಲೆಯಲ್ಲ, ಅದೊಂದು ಜ್ಞಾನದ ಮಂಥನ. ಇದೀಗ ಅಧೀಕ (ಪುರುಷೋತ್ತಮ) ಮಾಸದ ಪುಣ್ಯಕಾಲದ ಪ್ರಯುಕ್ತ, ಜಿಲ್ಲೆಯ ಪ್ರಸಿದ್ಧ ಕಲಾ ದಿಗ್ಗಜರೆಲ್ಲ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನ್ 13ರ ಶನಿವಾರದ ಮಧ್ಯಾಹ್ನ, ಕಲಾಪ್ರೇಮಿಗಳ ಪಾಲಿಗೆ ಒಂದು ಅದ್ಭುತ ರಸದೂಟ ಕಾಯುತ್ತಿದೆ!

​ ಭಕ್ತಿ-ಭಾವದ ಅದ್ಭುತ ಸಮ್ಮಿಲನ

​ಶ್ರೀ ವಿಠೋಬಾ ರುಕುಮಯಿ ದೇವಸ್ಥಾನ ಗುಂಡ್ಯಡ್ಕ, ಶ್ರೀನಿವಾಸ ಪುರ ಇಲ್ಲಿ ಅಧೀಕ ಮಾಸದ ಅಂಗವಾಗಿ ಜಿಲ್ಲೆಯ ಹೆಸರಾಂತ ಕಲಾವಿದರನ್ನೊಳಗೊಂಡ ‘ಯಕ್ಷಗಾನ ತಾಳಮದ್ದಳೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಬಾರಿ ಆಯ್ದುಕೊಂಡಿರುವ ಪ್ರಸಂಗ

‘ವಿಷ್ಣು ಸಹಸ್ರ ನಾಮ’. ಯಕ್ಷಗಾನ ತಾಳಮದ್ದಳೆ

​ದಿನಾಂಕ 13-06-2026 ನೇ ಶನಿವಾರದಂದು ಮಧ್ಯಾಹ್ನ 2:00 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ದೇವಸ್ಥಾನದ ಸನ್ನಿಧಿಯು ಭಾಗವತರ ಕಂಠಸಿರಿ ಹಾಗೂ ಹಿಮ್ಮೇಳದ ನಾದಕ್ಕೆ ಸಾಕ್ಷಿಯಾಗಲಿದೆ.

​ಕಲಾ ದಿಗ್ಗಜರ ದಂಡು

ಈ ತಾಳಮದ್ದಳೆಗೆ ರಂಗು ತುಂಬಲು ಹಿಮ್ಮೇಳ ಮತ್ತು ಮುಮ್ಮೇಳಗಳಲ್ಲಿ ಪ್ರಸಿದ್ಧ ಕಲಾವಿದರು ಜತೆಯಾಗುತ್ತಿದ್ದಾರೆ.

​ಹಿಮ್ಮೇಳದಲ್ಲಿ (ಭಾಗವತಿಕೆ)-

ಕರಾವಳಿಯ ಹೆಮ್ಮೆಯ ಕಂಠಸಿರಿ ಶ್ರೀ ಬಲಿಪ ಶಿವ ಶಂಕರ ಭಟ್ ಅವರ ಭಾಗವತಿಕೆ ಇರಲಿದೆ.

​ಚಂಡೆವಾದನ:- ಅಪ್ರತಿಮ ವಾದಕ ಶ್ರೀ ದೇವಾನಂದ್ ಭಟ್, ಬೆಳುವಾಯಿ.

​ಮದ್ದಳೆವಾದನ:- ಲಯಬದ್ಧ ನಾದ ನೀಡಲು ಶ್ರೀ ಗುರು ಪ್ರಸಾದ್ ಭಟ್, ಬೊಳಿಂಜಡ್ಕ ಹಾಗೂ ಶ್ರೀ ದಿವಿಜೇಶ್ ಡಿ. ಭಟ್ ಸಾಥ್ ನೀಡಲಿದ್ದಾರೆ.

​ಮುಮ್ಮೇಳದ ಅರ್ಥಧಾರಿಗಳು:-

ಮಾತಿನ ಮಂಟಪ ಕಟ್ಟಲು ಪ್ರಸಿದ್ಧ ಅರ್ಥಧಾರಿಗಳಾದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ವಾಸುದೇವ ರಂಗ ಭಟ್, ಮತ್ತು ಶ್ರೀ ರವಿರಾಜ್ ಭಟ್, ಪನೆಯಾಲ ಅವರು ಇರಲಿದ್ದಾರೆ.

ಸಂಘಟಕರು ನಾಡಿನ ಸಮಸ್ತ ಕಲಾಭಿಮಾನಿಗಳಿಗೆ ಹಾಗೂ ಭಕ್ತಾದಿಗಳಿಗೆ ಈ ಕಾರ್ಯಕ್ರಮಕ್ಕೆ ಆದರದ ಆತ್ಮೀಯ ಸ್ವಾಗತವನ್ನು ಸಂಘಟಕರು ಕೋರಿದ್ದಾರೆ.

​”ಕಲೆ ಮತ್ತು ಸಂಸ್ಕೃತಿಗಳು ಕೇವಲ ಮನರಂಜನೆಯ ಸಾಧನಗಳಲ್ಲ; ಅವು ನಮ್ಮ ಸಮಾಜದ ಬೇರುಗಳು ಮತ್ತು ನೈತಿಕ ಮೌಲ್ಯಗಳ ರಕ್ಷಾಕವಚ. ಇಂದಿನ ಆಧುನಿಕ ಹಾಗೂ ಜಾಗತೀಕರಣದ ಅಬ್ಬರದಲ್ಲಿ ನಮ್ಮ ಗ್ರಾಮೀಣ ಕಲೆಗಳಾದ ಯಕ್ಷಗಾನ ಮತ್ತು ತಾಳಮದ್ದಳೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ದಾಟಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕಲೆ ಬೆಳೆದರೆ ಮಾತ್ರ ನಮ್ಮ ಸಂಸ್ಕಾರ ಮತ್ತು ಭಾಷೆ ಜೀವಂತವಾಗಿರಲು ಸಾಧ್ಯ.”

LEAVE A REPLY

Please enter your comment!
Please enter your name here