ಅಲಯನ್ಸ್, ಲಯನ್ಸ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ವನಮಹೋತ್ಸವ ಆಚರಣೆ

0
41

ಮಂಗಳೂರು : ಅಲಯನ್ಸ್ ಕ್ಲಬ್ ಮಂಗಳೂರು , ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ, ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್, ಬಾರಿ ವಾಹನ ಚಾಲಕರ ತರಬೇತಿ ಕೇಂದ್ರ ಕಂಬಳ ಮುಡಿಪು, ಸೀನಿಯರು ಚೆಂಬರ್ ಇಂಟರ್ ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ, ಅರಣ್ಯ ಇಲಾಖೆ ಮಂಗಳೂರು, ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವದ ಪ್ರಯುಕ್ತ, ಆರ್ ಟಿ ಓ ಸೆಂಟರ್ ಕಂಬಳ ಪದವು ಮುಡಿಪು ನಲ್ಲಿ100 ಗಿಡ ನೆಡುವ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿ ರಾಜೇಶ್ ಬಳೆಗರು ಉದ್ಘಾಟಿಸಿ ಮಾತನಾಡಿದ ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆ, ಪೂರಕ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ನುಡಿದರು. ಬಾರಿ ವಾಹನ ಚಾಲಕರ ತರಬೇತಿ ಕೇಂದ್ರ ಕಂಬಳ ಮುಡಿಪು ಪಶಮುಖ್ಯ ಅತಿಥಿಗಳಾಗಿ ಅಲಯನ್ಸ್ ಕ್ಲಬ್ ಮಂಗಳೂರು ನ ಅಧ್ಯಕ್ಷರಾದ Ally LMF ಜಿ ಕೆ ಹರಿಪ್ರಸಾದ ರೈ ಕಾರಮೊಗರು, ಕಾರ್ಯದರ್ಶಿ Ally LMFವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಮಾಧವ ಉಲ್ಲಾಳ,ಸೀನಿಯರು ಚೆಂಬರ್ ಇಂಟರ್ನ್ಯಾಷನಲ್ ಉಲ್ಲಾಳ ರಾಣಿ ಅಬ್ಬಕ್ಕ, ಕಾರ್ಯದರ್ಶಿ ಸಂತೋಷ ಆಳ್ವ , ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ಅಧ್ಯಕ್ಷ ಯೋಗೀಶ್ ಕುಮಾರ್, ಕಾರ್ಯದರ್ಶಿ ಅಬ್ದುಲ್ ಖಾನ್,ವಲಯಧ್ಯಕ್ಷ ಹರಿಣಿ ಶೆಟ್ಟಿ, ಎಂ ಸಿ ಶೆಟ್ಟಿ, ಭಗವಾನ್ ದಾಸ್,ಲಯನ್ಸ್ ಕ್ಲಬ್ ಮಂಗಳೂರು ಕುಡ್ಲದ ಅಧ್ಯಕ್ಷರಾದ ಲಯನ್ ಯೋಗೀಶ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಲಯನ್ ಅಬ್ದುಲ್ ರಜಾಕ್, ಜಿಲ್ಲಾ ಕಾರ್ಯದರ್ಶಿ ಲಯನ್ ಚಂದ್ರಹಾಸ ರೈ, ಹರೀಶ ಆಳ್ವ ಅರಣೃ ಅಧಿಕಾರಿಗಳಾದ ಮೈಬೂಬ, ರೋಹಿತ್ ಕುಮಾರ್, ವೀಣಾ, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here